ವಿಶಾಖಪಟ್ಟಣ: ಪ್ರಧಾನಿ ನರೇಂದ್ರ ಮೋದಿಯವರ ‘ನೋಟು ರದ್ದು’ ನಿರ್ಧಾರ ಉತ್ತಮ ನಡೆ ಎಂದು ಟೆಸ್ಟ್ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ರಾಜ್ಕೋಟ್ನಲ್ಲಿ ನಾನು ಹೋಟೆಲ್ ಬಿಲ್ ಪಾವತಿ ಮಾಡಬೇಕಾಗಿ ಬಂದಾಗ ನನ್ನ ಕೈಯಲ್ಲಿರುವ ನೋಟಿಗೆ ಬೆಲೆ ಇಲ್ಲ ಎಂದು ಗೊತ್ತಾಗಿದ್ದು ಎಂದು ಹೇಳಿದ ಕೊಹ್ಲಿ, ನನ್ನ ಪ್ರಕಾರ ಇದೊಂದು ಉತ್ತಮ ನಡೆ.
ಇಲ್ಲಿಯವರೆಗೆ ಭಾರತದ ರಾಜಕೀಯ ಇತಿಹಾಸದಲ್ಲಿ ಇಂಥಾ ಹೆಜ್ಜೆಯನ್ನು ನಾನು ನೋಡಿಲ್ಲ, ಈ ನಿರ್ಧಾರವನ್ನು ನಾನು ಮೆಚ್ಚಿದ್ದೇನೆ ಎಂದು ಹೇಳಿದ್ದಾರೆ.
ಇಂಗ್ಲೆಂಡ್ ಆಟಗಾರರಿಗೆ ನೋಟು ಸಮಸ್ಯೆ
ಸದ್ಯ ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್ನ ಕ್ರಿಕೆಟ್ ಆಟಗಾರರು ನೋಟು ಸಮಸ್ಯೆಯಿಂದಾಗಿ ಹೊರಗಡೆ ಸುತ್ತಾಡಲು ಸಾಧ್ಯವಾಗದೆ, ಹೋಟೆಲ್ ಕೋಣೆಗಳಲ್ಲಿಯೇ ಉಳಿಯುವಂತಾಗಿದೆ.
ಸಾಮಾನ್ಯವಾಗಿ ವಿದೇಶಿ ಕ್ರಿಕೆಟಿಗರು ಭಾರತದ ಗಲ್ಲಿಗಳಲ್ಲಿ ಸುತ್ತಾಡಿ ಶಾಪಿಂಗ್ ಮಾಡುತ್ತಾರೆ. ಆದರೆ ನೋಟು ಸಮಸ್ಯೆಯಿಂದಾಗಿ ಗಲ್ಲಿಗಳಲ್ಲಿ ಸುತ್ತಾಡಲು ಸಾಧ್ಯವಾಗದೆ ಹೋಟೆಲ್ನಲ್ಲಿಯೇ ಸಮಯ ವ್ಯಯಿಸುವಂತಾಗಿದೆ.
Comments are closed.