ಮನೋರಂಜನೆ

ಲಾಕ್ ಡೌನ್‌: ಮತ್ತೊಂದು ಜನಪ್ರಿಯ ಸುಬ್ಬಲಕ್ಷ್ಮೀ ಸಂಸಾರ ಧಾರಾವಾಹಿ ಮುಕ್ತಾಯ!

Pinterest LinkedIn Tumblr


ಲಾಕ್ ಡೌನ್‌ ಆದಾಗಿನಿಂದ ಹಲವು ಧಾರಾವಾಹಿಗಳು ಮುಕ್ತಾಯವಾಗಿದೆ. ಅವುಗಳನ್ನು ಹೆಸರಿಸಿ ಹೇಳೋದು ಕಷ್ಟವೇ. ಅಷ್ಟರಮಟ್ಟಿಗೆ ಒಂದಾದಮೇಲೆ ಒಂದರಂತೆ ಧಾರಾವಾಹಿಗಳು ಮುಕ್ತಾಯವಾಗಿವೆ. ಹಾಗೆಯೇ ಈ ಲಿಸ್ಟ್‌ಗೆ ಹೊಸ ಸೇರ್ಪಡೆ ‘ಸುಬ್ಬಲಕ್ಷ್ಮೀ ಸಂಸಾರ’ ಧಾರಾವಾಹಿ. ಸ್ವಪ್ನ ಕೃಷ್ಣ ನಿರ್ದೇಶನದ ಈ ಧಾರಾವಾಹಿ ಈಗ ಮುಕ್ತಾಯವಾಗಿದೆ.

ಸುಬ್ಬಲಕ್ಷ್ಮೀ ಹಳ್ಳಿಯ ಮುಗ್ಧೆ. ಇವಳ ಗಂಡ ಆಫೀಸ್‌ವೊಂದರಲ್ಲಿ ಕೆಲಸ ಮಾಡುತ್ತಿರುತ್ತಾನೆ. ಇವರಿಬ್ಬರಿಗೂ ಓರ್ವ ಮಗ ಕೂಡ ಇದ್ದಾನೆ. ಆದರೆ ಸುಬ್ಬಿ ಗಂಡ ಗ್ಯಾರಿ ಇನ್ನೊಬ್ಬಳ ಹಿಂದೆ ಹೋಗುತ್ತಾನೆ. ಗಂಡನನ್ನು ಹೇಗೆ ಪಡೆದುಕೊಳ್ಳುತ್ತಾಳೆ ಎಂಬುದು ಈ ಧಾರಾವಾಹಿಯ ಕಥೆಯ ತಿರುಳಾಗಿತ್ತು.

ನಿರ್ದೇಶಕಿ ಸ್ವಪ್ನಾ ಕೃಷ್ಣ ಬರೆದ ಭಾವುಕ ಪತ್ರವಿದು…
ಬಹುತೇಕ ಮಂದಿಗೆ ಇಷ್ಟವಾದವಳು ನಮ್ಮ ಸುಬ್ಬಿ, ಹಳ್ಳಿ ಸೊಗಡಿನ ಮಾತು, ಅವಳ ಮುಗ್ದತೆ, ಅವಳು ತನ್ನ ನೋವನ್ನು ಸ್ವೀಕರಿಸಿದ ಶೈಲಿ ಎಷ್ಟೋ ಮಂದಿಗೆ ಇಷ್ಟ, ಆದರೆ ಎಲ್ಲಾ ಕಥೆಯಲ್ಲೂ ವಿಲನ್‌ಗಳು ಇದ್ದಹಾಗೆ ಈ ಧಾರಾವಾಹಿಯಲ್ಲಿ ಒಳಗು, ಹೊರಗೂ ವಿಲನ್‌ ಇದ್ದರು, ಸುಬ್ಬಿಯನ್ನು ಹೊರತು ಪಡಿಸಿ ಧಾರಾವಾಹಿಯ ಮುಖ್ಯ ಪಾತ್ರದಾರಿಗಳು ದುಡ್ಡು ಅಥವಾ ಕಾಂಪಿಟೇಷನ್ ಅನ್ನುವ ಸೆಳೆತದಿಂದ ಪ್ರೊಫೆಷನಲ್ ಎಥಿಕ್ಸ್ ಮರೆತು ಬೇರೆಡೆ ಹಾರಿ ಧಾರಾವಾಹಿಗೆ ತೊಂದರೆ ಕೊಟ್ಟಿದ್ದು ಉಂಟು, ಬಟ್ ಶೋ ಮಸ್ಟ್ ಗೋ ಆನ್ ಅನ್ನುವ ಹಾಗೆ ಸಮಸ್ಯೆಗಳು 200 ಸಂಚಿಕೆಗೆ ಶುರುವಾಯಿತಾದರೂ , ನಮ್ಮ ಸುಬ್ಬಿಗೆ 750 ಸಂಚಿಕೆಗಳ ಸಂಭ್ರಮ ತಂದು ಕೊಟ್ಟಿದ್ದು ನಮ್ಮ ಪ್ರೇಕ್ಷಕರು, ಅವಳನ್ನು ನಿಜವಾಗಲು ಗೆಲ್ಲಿಸಿದ್ದು ನೀವು. ಸುಬ್ಬಿಯ ಸಂಸಾರಕ್ಕೆ ಒಂದು ಒಳ್ಳೆ ಕ್ಲೈಮಾಕ್ಸ್ ಇದ್ದಿತಾದರೂ ಅದನ್ನು ನಿಮ್ಮ ಮುಂದೆ ತರಲು ಆಗುತ್ತಿಲ್ಲ ಅನ್ನುವ ನಿರಾಸೆ ಖಂಡಿತಾ ಇದೆ. ಸುಬ್ಬಿ ಖಂಡಿತಾ ಅರುಣಪ್ರಸಾದ್ ಅವರನ್ನು ಮದುವೆ ಆಗುತ್ತಲಿರಲ್ಲ. ಒಂದು ಗಂಡು-ಹೆಣ್ಣು ಒಳ್ಳೆಯ ಸ್ನೇಹಿತರು ಆಗಬಹುದು ಅವರದ್ದು ಪರಿಶುದ್ಧ ಸ್ನೇಹ ಅನ್ನುವ ಪಾಯಿಂಟ್, ಗ್ಯಾರಿಗೆ ಶಾನಯಾಳಿಂದ ಮೋಸ, ಗ್ಯಾರಿ ಕ್ಷಮೆ ಕೋರಿ ಸುಬ್ಬಿಯ ಮುಂದೆ ಬಂದಿದ್ದರೆ ಆಕೆ ಖಂಡಿತಾ………..

ಸುಬ್ಬಿಯನ್ನು ನಿಮ್ಮ ಮುಂದೆ ತರಲು ಎಷ್ಟೋ ಬಾರಿ ಕಷ್ಟ ಆದರೂ ಅದನ್ನು ಬದಿಗೊತ್ತಿ ಇಷ್ಟ ಪಟ್ಟು ಕೆಲಸ ಮಾಡಿದ ನಮ್ಮ ತಂತ್ರಜ್ಞರ ತಂಡ, ನಮ್ಮ ಬರವಣಿಗೆಯ ಟೀಮ್, ಪ್ರೊಡಕ್ಷನ್ ಟೀಮ್‌ನವರಿಗೆ ಧನ್ಯವಾದಗಳು.
ಕಲಾವಿದರಿಗೆ ಥ್ಯಾಂಕ್ಸ್. ಈ ಧಾರಾವಾಹಿಯನ್ನು ನಿಮ್ಮಮುಂದೆ ತರಲು ಅವಕಾಶ ಕೊಟ್ಟು ಜೀ ಕನ್ನಡಕ್ಕೆ ಸದಾ ಚಿರಋಣಿ. ಯಾವುದು ಅಂತ್ಯವಲ್ಲ ಆರಂಭ. ಮತ್ತೆ ಹೊಸ ಕಥೆ ಜೊತೆಗೆ ಎಲ್ಲರನ್ನು ರಂಜಿಸಲು ಬರುತ್ತೇವೆ.

ದೀಪಾ ಭಾಸ್ಕರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಧಾರಾವಾಹಿಯಿದು
ದೀಪಾ ಭಾಸ್ಕರ್ ಈ ಧಾರಾವಾಹಿಯಲ್ಲಿ ಸುಬ್ಬಲಕ್ಷ್ಮೀ ಪಾತ್ರದಲ್ಲಿ ನಟಿಸಿದ್ದರು. ನಟಿ ಅಪೇಕ್ಷಾ ಅವರು ಶನಾಯಾ ಪಾತ್ರದಲ್ಲಿ, ಭವಾನಿ ಸಿಂಗ್ ಅವರು ಗ್ಯಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತದನಂತರದಲ್ಲಿ ಅಪೇಕ್ಷಾ ಕಲರ್ಸ್ ಕನ್ನಡದಲ್ಲಿ ‘ಮೂರು ಗಂಟು’ ಧಾರಾವಾಹಿಯಲ್ಲಿ ನಟಿಸಲು ಈ ಸೀರಿಯಲ್ ಬಿಟ್ಟರು. ಭವಾನಿ ಸಿಂಗ್ ಕೂಡ ‘ರಕ್ಷಾ ಬಂಧನ’ ಧಾರಾವಾಹಿಗೋಸ್ಕರ ಈ ಸೀರಿಯಲ್‌ನಿಂದ ಹೊರನಡೆದರು. ಸ್ವಪ್ನಾ ಅವರು ಪರೋಕ್ಷವಾಗಿ ಇವರ ಬಗ್ಗೆಯೇ ಮಾತನಾಡುತ್ತಿರಬಹುದು.

Comments are closed.