ಮನೋರಂಜನೆ

4 ಗಂಟೆ ಮೇಕಪ್ ಮಾಡಸ್ತಿದ್ರು: ರಾಧಿಕಾ ಕುಮಾರಸ್ವಾಮಿ

Pinterest LinkedIn Tumblr


‘ದಮಯಂತಿ’ ಸಿನಿಮಾ ಟೀಸರ್ ನಿಜಕ್ಕೂ ಅದ್ಭುತವಾಗಿದೆ. ರಾಧಿಕಾ ಅವರ ಹಾರರ್ ಲುಕ್ ನೋಡಿದವರು ಒಮ್ಮೆ ಅವಾಕ್ಕಾಗುತ್ತಾರೆ. ರಾಧಿಕಾ ಅವರ ಉಡುಗೆ ತುಂಬ ಚೆನ್ನಾಗಿದೆ. ಬಹುಪಾಲು ಜನರು ಈ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶ್ರೀಲಕ್ಷ್ಮೀ ವೃಷಾದ್ರಿ ಪ್ರೊಡಕ್ಷನ್ ಲಾಂಛನದಡಿ ಈ ಸಿನಿಮಾ ಮೂಡಿ ಬಂದಿದೆ. ಪರಭಾಷೆಯ ‘ಅರುಂಧತಿ, ಭಾಗಮತಿ’ ಸಿನಿಮಾ ರೀತಿಯಲ್ಲಿ ಈ ಸಿನಿಮಾ ಮೂಡಿಬಂದಿದೆಯಂತೆ.

” ವಿಭಿನ್ನ ರೀತಿಯ ಪಾತ್ರ ಮಾಡಬೇಕು ಅಂತ ಆಸೆ ಇತ್ತು. ‘ದಮಯಂತಿ’ ರೀತಿ ಪಾತ್ರ ಮಾಡಬೇಕು ಅಂತ ಕನಸಿತ್ತು. ಈಗ ಟೀಸರ್ ನೋಡಿದ ಮೇಲೆ ಖುಷಿ ಆಯ್ತು. ನಟಿಸುವಾಗ ಹೇಗೆ ಬಂತು ಗೊತ್ತಾಗೋದಿಲ್ಲ. ಜಾಗದಲ್ಲೇ ಡೈಲಾಗ್ ಕೊಡ್ತಾ ಇದ್ರು. ಇಲ್ಲಿ ಡೈಲಾಗ್ ಹೇಳೋದು ಸ್ವಲ್ಪ ಕಷ್ಟ. ಕೆಲ ಮಾತುಗಳಿಗೆ ನಾಲಿಗೆ ಹೊರಳಲ್ಲ. ನಿರ್ದೇಶಕರು ಮರೂನ್ ಕಲರ್ ಸೀರೆ, ಜ್ಯುವೆಲರಿ ಹುಡುಕಿ ತಂದಿದ್ದಾರೆ. ಹೇರ್‌ಸ್ಟೈಲ್, ಕಣ್ಣಿನ ಮೇಕಪ್‌ಗೆ ತುಂಬ ಇಂಟೆರೆಸ್ಟ್ ತಗೊಂಡು 4 ಗಂಟೆ ಮೇಕಪ್ ಮಾಡಸ್ತಿದ್ರು. ಬಾಂಬೆಯಿಂದ ಮೇಕಪ್ ಮ್ಯಾನ್ ಕರೆಸಿದ್ದಾರೆ. ಈ ರೀತಿ ಗೆಟಪ್, ಡೈಲಾಗ್ ಯಾವ ಸಿನಿಮಾದಲ್ಲೂ ಮಾಡಿರಲಿಲ್ಲ. ‘ದಮಯಂತಿ’, ‘ಭೈರಾದೇವಿ’ ಸಿನಿಮಾ ಕಥೆ ಬೇರೆ ಬೇರೆ. ಅದಕ್ಕೂ ಇದಕ್ಕೂ ಯಾವ ರೀತಿ ಸಂಬಂಧವಿಲ್ಲ. ದಮಯಂತಿ ಕ್ಯಾರೆಕ್ಟರ್‌ ಜೊತೆಗೆ ಬೇರೆ ತರ ಕ್ಯಾರೆಕ್ಟರ್ ಕೂಡ ಈ ಸಿನಿಮಾದಲ್ಲಿದೆ” ಎಂದು ಹೇಳಿದ್ದಾರೆ ರಾಧಿಕಾ ಕುಮಾರಸ್ವಾಮಿ.
ರಾಧಿಕಾ ಕುಮಾರಸ್ವಾಮಿ ‘ದಮಯಂತಿ’ ಟೀಸರ್ ರಿಲೀಸ್‌ಗೆ ಮುಹೂರ್ತ ಫಿಕ್ಸ್

‘ದಮಯಂತಿ’, ‘ಭೈರಾದೇವಿ’ ಸಿನಿಮಾ ಬಗ್ಗೆ ಮಾತನಾಡಿದ ಸ್ವೀಟಿ ರಾಧಿಕಾ ” ‘ದಮಯಂತಿ, ‘ಭೈರಾದೇವಿ’ ಸಿನಿಮಾಗಳಿಗೆ ಯಾವುದೇ ಕ್ಲ್ಯಾಶ್ ಆಗೋದಿಲ್ಲ. ನಾನು ನಿರ್ಮಾಪಕಿ, ನಿರ್ದೇಶಕರು ಕೂಡ ನಿರ್ಮಾಪಕರು. ಹೀಗಾಗಿ ನಮ್ಮಿಬ್ಬರ ನಡುವೆ ಒಳ್ಳೆಯ ಅಂಡರ್‌ಸ್ಟ್ಯಾಂಡಿಂಗ್ ಇದೆ. ಹೀಗಾಗಿ ಸಮಸ್ಯೆ ಇಲ್ಲ. ಈ ಸಿನಿಮಾ ರಿಲೀಸ್ ಆದಮೇಲೆ ನನ್ನ ಮಗಳಾಗಲೀ, ನನ್ನ ಅಣ್ಣನ ಮಕ್ಕಳು ನನ್ನ ಹತ್ತಿರ ಬರಲ್ಲ ಅಂತ ಅನ್ನಸ್ತಿದೆ. ‘ಭೈರಾದೇವಿ’ ಸಿನಿಮಾ ಮಾಡುತ್ತಿರೋದರಿಂದ ನಿರ್ದೇಶಕರ ಬಳಿ ಆರು ತಿಂಗಳು ಟೈಮ್ ಕೇಳಿದ್ದೆ. ನನ್ನ ಮನೆಯವರು ಈ ಸಿನಿಮಾ ಮಿಸ್ ಮಾಡ್ಕೋಬೇಡಿ ಎಂದು ಹೇಳಿದ್ದರು. ನನ್ನ ಒಂದು ಫೋಟೋ ನೋಡಿ ನಿರ್ದೇಶಕರು ‘ದಮಯಂತಿ’ ಪಾತ್ರಕ್ಕೆ ನಾನೇ ಸೂಕ್ತ ಅಂತಂದುಕೊಂಡು ನನ್ನ ಹತ್ತಿರ ಕಥೆ ಹೇಳಿದ್ರು. ‘ದಮಯಂತಿ’ ಟೈಟಲ್ ನನಗೆ ತುಂಬ ಇಷ್ಟ ಆಯ್ತು. ಭಜರಂಗಿ ಲೋಕಿ ಹೈಟ್ ನೋಡಿ ತುಂಬ ಭಯ ಆಯ್ತು. ಅವರ ಜೊತೆ ನಟಿಸುವಾಗ ನಾನು ಹೀಲ್ಸ್ ಹಾಕಿದ್ರೆ ಸಾಕಾಗಲ್ಲ, ಸ್ಟೂಲ್ ಹತ್ತಬೇಕು” ಎಂದು ಹೇಳಿದ್ದಾರೆ ರಾಧಿಕಾ ಕುಮಾರಸ್ವಾಮಿ.

“ಕರಾಳ ರಾತ್ರಿ ಸಿನಿಮಾ ಮಾಡುವಾಗ ನನಗೆ ‘ದಮಯಂತಿ’ ಕಥೆ ಹೊಳೆದಿದ್ದು. ರಾಧಿಕಾ ಅವರ ಫೋಟೋ ನೋಡಿದ ಮೇಲೆ ಇವರೇ ದಮಯಂತಿ ಪಾತ್ರ ಮಾಡಬೇಕು ಅಂದುಕೊಂಡೆ. ನನಗೆ ರಾಧಿಕಾ ಮತ್ತು ಅವರ ಅಣ್ಣ ನನ್ನ ಕಥೆ ಕೇಳಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು ಕೇಳಿ ತುಂಬ ಖುಷಿಯಾಯಿತು. ಅದನ್ನು ನಾನು ನಿರೀಕ್ಷಿಸಿರಲಿಲ್ಲ. ರಾಧಿಕಾ ಅವರ ಹತ್ತಿರ ಕಥೆ ಹೇಳಿದನಂತರ ಸ್ವಲ್ಪ ಕಥೆ ಬದಲಾಯಿಸಿಕೊಂಡೆ. ಟೀಮ್ ವರ್ಕ್ ತುಂಬ ಚೆನ್ನಾಗಿದೆ. ಈ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಈ ಸಿನಿಮಾ ಮೂಡೀ ಬರಲು ಕಾರಣ ಪಿಆರ್‌ಒ ಸುಧೀಂದ್ರ ವೆಂಕಟೇಶ್ ಅವರು. ನಮ್ಮ ಚಿತ್ರತಂಡದಲ್ಲಿ ಕನ್ನಡಿಗರನ್ನು ಹೆಚ್ಚಾಗಿ ಬಳಸಿಕೊಂಡಿದ್ದೇವೆ. ಕನ್ನಡಿಗರ ಶ್ರಮ ಹೇಗಿದೆ ಅನ್ನೋದನ್ನು ಪರರಾಜ್ಯದವರಿಗೂ ತೋರಿಸಬೇಕು” ಎಂದು ಹೇಳಿದ್ದಾರೆ ನಿರ್ದೇಶಕ ನವರಸನ್.
ಪ್ಯಾನ್‌ ಇಂಡಿಯಾ ಮಹಿಳಾ ಸಿನಿಮಾ ದಮಯಂತಿ : ಸ್ಯಾಂಡಲ್‌ವುಡ್‌ಗೆ ಇನ್ನೊಂದು ಗರಿ

ಇಂದಿನ ಯುಗದ ಕಥೆ ಜೊತೆಗೆ ಐತಿಹಾಸಿಕ ಕಥಾಹಂದರವೂ ಇದರಲ್ಲಿ ಮಿಶ್ರಿತವಾಗಿದೆ. ಹಾರರ್, ಥ್ರಿಲ್ಲರ್, ಕಾಮಿಡಿ ಈ ಚಿತ್ರದಲ್ಲಿದೆ. ಗಣೇಶ್ ನಾರಾಯಣ್ ಅವರ ಸಂಗೀತ , ಮಾಸ್ತಿ ಸಂಭಾಷಣೆ, ಮಹೇಶ್ ಸಂಕಲನ, ಪಿ.ಕೆ.ಎಚ್.ದಾಸ್ ಅವರ ಕ್ಯಾಮೆರಾ ಕೈಚಳಕ ಈ ಚಿತ್ರಕ್ಕಿದೆ. ಶಶಿಕಲಾ ಅವರು ರಾಧಿಕಾ ಅವರ ಪಾತ್ರಕ್ಕೆ ಡಬ್ ಮಾಡಿದ್ದಾರೆ. ಮಿತ್ರ, ತಬಲಾ ನಾಣಿ, ಸಾಧುಕೋಕಿಲ, ಮಜಾ ಟಾಕೀಸ್ ಖ್ಯಾತಿಯ ಪವನ್, ವೀಣಾ ಸುಂದರ್, ಹೊನ್ನವಳ್ಳಿ ಕೃಷ್ಣ, ಕೆಂಪೇಗೌಡ, ಗಿರಿ, ಶರತ್, ರಾಜ್ ಬಲ್ವಾಡಿ, ನವೀನ್ ಕೃಷ್ಣ, ಅನುಷಾ ರೈ, ಶರಣ್, ಬೇಬಿ ಲಲನಾ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

Comments are closed.