ಮನೋರಂಜನೆ

ಇರುವುದೆಲ್ಲವ ಬಿಟ್ಟು ಸಿನೆಮಾಕ್ಕಾಗಿ ಯೋಗರಾಜ ಭಟ್ ರಿಂದ ಅಮಿಕಂಡಿರೋ ಹಾಡು!

Pinterest LinkedIn Tumblr


ಬೆಂಗಳೂರು: ನಿರ್ದೇಶಕ ಕಾಂತ ಕನ್ನಲಿ ಕಡೇ ಕ್ಷಣಗಳಲ್ಲಿ ಇರುವುದೆಲ್ಲವ ಬಿಟ್ಟು ಚಿತ್ರದ ಬಗ್ಗೆ ಮತ್ತಷ್ಟು ಪ್ರೇಕ್ಷಕರನ್ನು ಸೆಳೆಯುವಂಥಾದ್ದೊಂದು ಕೆಲಸ ಮಾಡಿದ್ದಾರೆ. ಕಾಂತ ಕನಸಿಗೆ ನಿರ್ದೇಶಕ ಯೋಗರಾಜ ಭಟ್ಟರೂ ಕೈ ಜೋಡಿಸಿದ್ದಾರೆ. ಇದರಿಂದಾಗಿಯೇ ಸಿದ್ಧಗೊಂಡಿರೋ ಪ್ರಮೋಷನ್ ಸಾಂಗ್ ಈಗ ಸೂಪರ್ ಹಿಟ್ ಆಗಿ ಬಿಟ್ಟಿದೆ!

ಇರುವುದೆಲ್ಲವ ಬಿಟ್ಟು ಚಿತ್ರದ ಪ್ರಮೋಷನ್ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಹುಮ್ಮಸ್ಸಿನಿಂದ ಹರಿಡಾಡಲಾರಂಭಿಸಿದೆ. `ಈ ಜೀವನ ಎಲ್ಲಾನು ಕಲಿಸುತ್ತೆ ಅಮಿಕಂಡಿರೋದನ್ನ ಬಿಟ್ಟು. ಈ ಜೀವನ ನಮಗರ್ಥ ಆಗೋದ್ರೊಳಗೆ ಎಲ್ಲ ಕೂತ್ಕೊಂಡ್ಬಿಟ್ವಲ್ಲಪ್ಪ ಕೆಟ್ಟು’ ಎಂಬ ಹಾಡನ್ನು ಯೋಗರಾಜ ಭೌಟ್ ಬರೆದಿದ್ದಾರೆ. ಅದಕ್ಕೆ ಸಮ್ಮೋಹಕ ಸಂಗೀತ ಸ್ಪರ್ಶ ನೀಡಿರುವವರು ಅನಂತ್ ಕಿಶನ್. ಕನ್ನಡ ಕೋಗಿಲೆ ಖ್ಯಾತಿಯ ಗಣೇಶ್ ಕಾರಂತ್ ಹಾಡಿರೋ ಈ ಹಾಡಿಗೆ ಎಲ್ಲರೂ ಫಿದಾ ಆಗಿದ್ದಾರೆ.

ಇದು ಈ ಚಿತ್ರದ ಒಟ್ಟಾರೆ ಆಂತರ್ಯವನ್ನು ಧ್ವನಿಸುವಂಥಾ ಹಾಡು. ಅಷ್ಟೇ ಆಗಿದ್ದರೆ ಬಹುಶಃ ಇದು ಈ ಪಾಟಿ ಪ್ರಸಿದ್ಧಿ ಪಡೆದುಕೊಳ್ಳುತ್ತಿರಲಿಲ್ಲವೇನೋ. ಇದು ಬದುಕಿಗೂ ಅನ್ವಯಿಸುವಂತಿದೆ. ಹಾಗಂದ ಮೇಲೆ ಈ ಚಿತ್ರ ಕೂಡಾ ಹಾಡಿನಂತೆಯೇ ಹಿಟ್ ಆಗೋದರಲ್ಲಿ ಸಂದೇಹವೇನಿಲ್ಲ!

ಇರುವುದೆಲ್ಲವ ಬಿಟ್ಟು ಚಿತ್ರ ಇದೇ ತಿಂಗಳು 21 ರಿಲೀಸ್ ಆಗಲಿದೆ.

Comments are closed.