ಮನೋರಂಜನೆ

ನಟಿ ಶ್ರೀದೇವಿ ಸಾವಿನ ಸುತ್ತ ಅನುಮಾನದ ಹುತ್ತ!

Pinterest LinkedIn Tumblr

ಮುಂಬೈ: ನಟಿ ಶ್ರೀದೇವಿ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಆಕೆಯ ಕುಟುಂಬಸ್ಥರು ತಿಳಿಸಿದ್ದರೂ ಆಕೆಯ ಅಭಿಮಾನಿಗಳು ಮಾತ್ರ ಆಕೆಯ ಸಾವಿನ ಸುತ್ತ ಅನುಮಾನ ವ್ಯಕ್ತಪಡಿಸಿದ್ದಾರೆ. ದುಬೈ ಅಧಿಕಾರಿಗಳು ಆಕೆಯ ಮರಣೋತ್ತರ ಪರೀಕ್ಷೆ ನಡೆಸಲು ಸೂಚಿಸಿರುವುದು ಈ ಅನುಮಾನಕ್ಕೆ ಕಾರಣವಾಗಿದೆ ಎಂದು ಹಲವು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದರ ಜಾಲತಾಣ ವರದಿ ಮಾಡಿದೆ.

ಶ್ರೀದೇವಿ ಎರಡು ದಿನಗಳಿಂದ ತಮ್ಮ ಹೊಟೇಲ್ನ ಕೋಣೆಯಿಂದ ಹೊರಗೆ ಬಂದಿರಲಿಲ್ಲ ಎಂಬ ವಿಷಯವು ತಡವಾಗಿ ಬೆಳಕಿಗೆ ಬಂದಿದ್ದು, ಆಕೆಯ ಆರೋಗ್ಯದ ಬಗ್ಗೆ ಹೊಟೇಲ್ನ ಸಿಬ್ಬಂದಿ ವಿಚಾರಿಸಿದ್ದಾರೆಯೇ ಎಂಬುದರ ಕುರಿತೂ ತನಿಖೆ ನಡೆಯುತ್ತಿದೆ. ವಿವಾಹದ ಸಮಾರಂಭದಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ್ದ ಶ್ರೀದೇವಿ ಎರಡು ದಿನಗಳ ಕಾಲ ಕೋಣೆಯಲ್ಲಿ ಉಳಿದಿದ್ದರೂ ಆಕೆಯ ಆರೋಗ್ಯ ತಪಾಸಣೆಗೆ ಯಾವ ವೈದ್ಯರೂ ಬರದಿರುವುದು ಕೂಡಾ ಹಲವು ಊಹಾಪೋಹಗಳಿಗೆ ಕಾರಣವಾಗಿದೆ ಎಂದು ಜಾಲತಾಣ ವರದಿ ಮಾಡಿದೆ.

ಶ್ರೀದೇವಿಗೆ ಯಾವ ಆರೋಗ್ಯ ಸಮಸ್ಯೆಯೂ ಇರಲಿಲ್ಲ. ವಿವಾಹ ಸಮಾರಂಭಕ್ಕೆ ಮೊದಲು ಕೂಡಾ ಆಕೆ ಆರೋಗ್ಯವಂತಳಾಗಿದ್ದರು ಎಂದು ಆಕೆಯ ಕುಟುಂಬಸ್ಥರು ಈ ಹಿಂದೆಯೇ ತಿಳಿಸಿದ್ದಾರೆ. ಆಕೆ ತನ್ನ ಸೌಂದರ್ಯ ವರ್ಧನೆಗಾಗಿ ಹಲವು ಬಾರಿ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿರುವುದು ಆಕೆಯ ಅನಿರೀಕ್ಷಿತ ಸಾವಿಗೆ ಕಾರಣವಾಗಿರಬಹುದು ಎಂಬ ಅನುಮಾನಗಳನ್ನು ನೆಟ್ಟಿಗರು ವ್ಯಕ್ತಪಡಿಸಿದ್ದಾರೆ ಎಂದು ವೆಬ್‌ಸೈಟ್ ವರದಿ ಮಾಡಿದೆ.

Comments are closed.