ಬೆಂಗಳೂರು: ಬಿಗ್ಬಾಸ್ ಮನೆಯಲ್ಲಿ ಈ ವಾರ ಎಲ್ಲರ ಅನಿಸಿಕೆಯಂತೆ ಆಶಿತಾ ಹೊರನಡೆದಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಪದೇ ಪದೇ ಅನಾರೋಗ್ಯಕ್ಕೀಡಾಗುತ್ತಿದ್ದ ಆಶಿತಾ ಸ್ಪರ್ಧಾ ಮನೋಭಾವವೇ ಕಳೆದುಕೊಂಡಂತಿತ್ತು. ಬಹುತೇಕ ಮಂದಿ ಈ ವಾರ ಆಶಿತಾ ಔಟ್ ಆಗುವುದು ಖಚಿತ ಎಂದಿದ್ದರು.
ಕಳೆದ ವಾರ ಮನೆಯಲ್ಲಿ 11 ಜನ ಸ್ಪರ್ಧಿಗಳಿದ್ದರು. ಇವರಲ್ಲಿ ಒಬ್ಬ ಸ್ಪರ್ಧಿ ನಿನ್ನೆ ಮನೆಯಿಂದ ಹೊರ ಹೋದ್ರು. ಈ ವಾರಕ್ಕೆ ಮನೆಯಿಂದ ಹೊರ ಹೋಗಲು, ಅನುಪಮಾ, ಕೃಷಿ, ಚಂದನ್, ಜೆಕೆ , ಜಯ ಶ್ರೀನಿವಾಸನ್, ಶೃತಿ, ಸಮೀರ್ ,ರಿಯಾಜ್, ನಿವೇದಿತಾ, ದಿವಾಕರ್ ಹಾಗೂ ಆಶಿತಾ ನಾಮಿನೇಟ್ ಆಗಿದ್ರು.
ನಿನ್ನೆ ನಡೆದ ವಾರದ ಕಥೆ ಕಿಚ್ಚನ ಜತೆ ಎಪಿಸೋಡಿನಲ್ಲಿ ಎಲಿಮಿನೇಟ್ ಪ್ರಕ್ರಿಯೆ ನಡೆಯಿತು. ಮೊದಲು ಅನುಪಮಾ ಅವರನ್ನು ಉಳಿಸಿಕೊಂಡ ಸುದೀಪ್ ಅವರು, ಬಳಿಕ ಕೃಷಿ, ಚಂದನ್, ಜೆಕೆ, ಜಯ ಶ್ರೀನಿವಾಸನ್, ಶೃತಿ, ಸಮೀರ್, ರಿಯಾಜ್ ಹಾಗೂ ನಿವೇದಿತಾ ಅವರನ್ನು ಸೇಫ್ ಮಾಡಿದ್ರು. ಇನ್ನುಳಿದ ದಿವಾಕರ್ ಹಾಗೂ ಆಶಿತಾ ಈ ಇಬ್ಬರಲ್ಲಿ ಯಾರು ಮನೆಗೆ ಹೋಗಲಿದ್ದಾರೆ ಎನ್ನುವ ಕೌತುಕ ಎಲ್ಲರಲ್ಲೂ ಮೂಡಿತ್ತು. ಕೊನೆಯದಾಗಿ ದಿವಾಕರ್ ಅವರನ್ನು ಸೇಫ್ ಮಾಡುವುದರ ಮೂಲಕ ಆಶಿತಾ ರನ್ನು ಎಲಿಮಿನೇಟ್ ಮಾಡಿದ್ರು ಬಿಗ್ಬಾಸ್.
ಇನ್ನು ಆಶಿತಾ ಎಲಿಮಿನೇಟ್ ಆಗಿರುವ ಸುದ್ದಿ ಹೊರಬೀಳುತ್ತಿದ್ದಂತೆ ಜಗನ್ ಅವರ ಮುಖ ಸಪ್ಪೆಯಾಯಿತು. ಭಾರವಾದ ಹೃದಯದಿಂದಲೇ ಆಶಿತಾ ಅವರನ್ನು ಬೀಳ್ಕೊಟ್ರು ಮನೆಯ ಸದಸ್ಯರು. ಬಿಗ್ಬಾಸ್ ಆದೇಶದಂತೆ ಮುಂದಿನ ವಾರಕ್ಕೆ ಸೂಪರ್ ಅಧಿಕಾರವನ್ನು ಜಗನ್ ಅವರಿಗೆ ನೀಡಿ ಮನೆಯಿಂದ ಹೊರ ನಡೆದ್ರು ಆಶಿತಾ..
Comments are closed.