ಮನೋರಂಜನೆ

ಬಿಗ್‌ಬಾಸ್‌‌ ಮನೆಯಲ್ಲಿ ಅಕುಲ್‌, ರಿಯಾಜ್‌, ಚಂದನ್‌ ಜೊತೆ ಕಿತ್ತಾಡಿಕೊಂಡ ಜಗನ್ !

Pinterest LinkedIn Tumblr

ಬೆಂಗಳೂರು: ಬಿಗ್‌ಬಾಸ್‌‌ ಮನೆಯಲ್ಲಿ ತಣ್ಣಗಾಗಿದ್ದ ಜಗನ್ ಮತ್ತೆ ತನ್ನ ಚಾಳಿಯನ್ನು ಮುಂದುವರಿಸಿದ್ದು, ರಿಯಾಜ್, ಚಂದನ್ ಶೆಟ್ಟಿ ಹಾಗು ಮನೆಗೆ ಅತಿಥಿಯಾಗಿ ಬಂದಿರುವ ಅಕುಲ್ ಬಾಲಾಜಿ ಜೊತೆ ಕಿತ್ತಾಡಿಕೊಂಡಿದ್ದಾರೆ.

ಪ್ರಾಣಿಗಳು ಹಾಗೂ ಮನುಷ್ಯರ ನಡುವೆ ಇರುವ ಸೌಹಾರ್ದತೆಯನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಗಂಧದ ಗುಡಿ ಎನ್ನುವ ಟಾಸ್ಕ್‌ ನೀಡಿದ್ದರು ಬಿಗ್‌ಬಾಸ್‌. ಈ ಟಾಸ್ಕ್‌ ಅನ್ವಯ ಮನೆಯ ಸದಸ್ಯರನ್ನು ಕಾಡು ಪ್ರಾಣಿಗಳು ಹಾಗೂ ಕಾಡು ಜನರನ್ನಾಗಿ ಎರಡು ಗುಂಪುಗಳನ್ನು ಮಾಡಿದ್ದರು.

ಮನೆಯ ಕ್ಯಾಪ್ಟನ್ ಜಗನ್, ದಿವಾಕರ್, ಸಮೀರಾಯಾಚಾರ್ಯ, ಅನುಪಮಾ, ನಿವೇದಿತಾ, ಆಶಿತಾ ಪ್ರಾಣಿಗಳಾಗಿದ್ದರೆ, ಜೆಕೆ, ರಿಯಾಜ್, ಚಂದನ್ ಶೆಟ್ಟಿ, ಕ್ರುಷಿ, ಶ್ರುತಿ, ವೈಷ್ಣವಿ ಕಾಡು ಜನರಾಗಿದ್ದಾರೆ, ಮನೆಗೆ ಅತಿಥಿಯಾಗಿ ಬಂದಿರುವ ಅಕುಲ್ ಬಾಲಾಜಿಗೆ ಕಾಡು ಜನರ ಸಹಾಯದಿಂದ ಕಾಡು ಪ್ರಾಣಿಗಳನ್ನು ಸೆರೆ ಹಿಡಿಯುವ ಕೆಲಸವನ್ನು ನೀಡಲಾಗಿತ್ತು.

ಈ ವೇಳೆ ಟಾಸ್ಕಿನ ನಿಯಮಕ್ಕೆ ಕ್ಯಾರೇ ಅನ್ನದ ಜಗನ್, ದಿವಾಕರ್, ಸಮೀರಾಯಾಚಾರ್ಯ ತಮ್ಮದೇ ಆದ ವಾದವನ್ನು ಅಕುಲ್ ಮುಂದೆ ಇಟ್ಟರು. ಇದಕ್ಕೆ ಅಕುಲ್ ಕೂಡ ಕ್ಯಾರೇ ಅನ್ನಲಿಲ್ಲ. ಇದೆ ವೇಳೆ ರಿಯಾಜ್, ಚಂದನ್ ಶೆಟ್ಟಿ ಹಾಗು ಅಕುಲ್ ಜೊತೆ ಹೊಡೆಯುವಂತೆ ಮುನ್ನುಗ್ಗಿ ಬಂದ ಜಗನ್, ತನ್ನ ಈ ಹಿಂದಿನ ಚಾಳಿಯನ್ನು ಬಿಟ್ಟಿಲ್ಲ ಎಂಬುದನ್ನು ಮತ್ತೆ ಸಾಭೀತು ಪಡಿಸಿದರು.

ಒಂದು ಹಂತದವರೆಗೆ ಚೆನ್ನಾಗಿ ನಡೆಯುತ್ತಿದ್ದ ಟಾಸ್ಕ್‌ ಬರಬರುತ್ತ ಜಗಳಕ್ಕೆ ತಿರುಗಿತು. ಸೆರೆ ಹಿಡಿಯಲು ಬಂದ ಅಕುಲ್ ಜತೆ ಜಗಳ ಮಾಡಿಕೊಂಡ್ರು ಜಗನ್‌. ಮೈ ಕೈ ಮುಟ್ಟಿದ್ರೆ ಸುಮ್ಮನಿರೋಲ್ಲ ಎಂದು ಹೇಳಿದ್ರು. ಇದಾದ ಬಳಿಕ ರಿಯಾಜ್ ಜತೆ ಹಾಗೂ ಚಂದನ್ ಜತೆ ಜಗಳ ಮಾಡಿಕೊಂಡ್ರು. ರಿಯಾಜ್ ಹಾಗೂ ಚಂದನ್ ಜತೆಗಿನ ಜಗಳ ಜೋರಾಗಿತ್ತು. ಇನ್ನು ಇದೇ ವೇಳೆ ನಮಗೂ ಕೋಪ ಬರುತ್ತೆ, ನೀನಗಷ್ಟೆ ಅಲ್ಲ ಅಂದು ಜಗನ್‌ಗೆ ಕ್ಲಾಸ್‌ ತೆಗೆದುಕೊಂಡ್ರು ಚಂದನ್.

 

Comments are closed.