ಮನೋರಂಜನೆ

ಬಿಗ್‌ಬಾಸ್‌ನಲ್ಲಿ ದೋಸ್ತುಗಳಾಗಿದ್ದ ರಿಯಾಜ್‌-ದಿವಾಕರ್‌ ಈಗ ದುಷ್ಮನ್ !

Pinterest LinkedIn Tumblr

ಬಿಗ್‌ಬಾಸ್‌ 5 ನೇ ಸಿಸನ್‌ನಲ್ಲಿ ದೋಸ್ತುಗಳಾಗಿದ್ದವರು ಈಗ ದುಷ್ಮನ್ಗಳಾಗಿದ್ದಾರೆ. ಇನ್ನೊಂದೆಡೆ ಬಿಗ್‌ಬಾಸ್‌ ಮನೆ ದಿನ ಕಳೆದಂತೆ ಗೊಂದಲದ ಗೂಡಾಗುತ್ತಿದೆ.

ಸೆಲೆಬ್ರಿಟಿಗಳ ಹಾಗೂ ಸಾಮಾನ್ಯ ಸ್ಪರ್ಧಿಗಳು ಸಮ್ಮಿಲನವಾಗಿರುವುದು ಎಲ್ಲರಿಗೂ ಗೊತ್ತೆ ಇದೆ. ಮನೆಯ ಸಾಮಾನ್ಯ ಸ್ಪರ್ಧಿಗಳಾಗಿರುವ ದಿವಾಕರ್‌, ಜಯ ಶ್ರೀನಿವಾಸನ್‌, ರಿಯಾಜ್, ಚೆಂದನ್‌ ಶೆಟ್ಟಿ ಅವರ ನಡುವೆ ಮೊದಲಿನಿಂದಲೂ ಕೊಂಚ ಹೆಚ್ಚಿನ ಆತ್ಮೀಯತೆ, ಸಲುಗೆ, ಬಾಂಧವ್ಯ ಇದೆ ಎಂದು ಹೇಳಿದ್ರೆ ತಪ್ಪಾಗಲಿಕ್ಕಿಲ್ಲ. ಆದರೆ, ದಿನಗಳು ಉರುಳಿದಂತೆ ಎಲ್ಲರಲ್ಲೂ ಸ್ಪರ್ಧೆ ಗೆಲ್ಲುವ ಗುರಿ ಗಟ್ಟಿಗೊಳ್ಳುತ್ತಿದೆ. ಇದು ಅವರನ್ನು ಸ್ವಾರ್ಥಿಗಳನ್ನಾಗಿ ಮಾಡುತ್ತಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಇದೇ ವಿಷಯಕ್ಕಾಗಿ ನಿನ್ನೆ ಬಿಗ್‌ಬಾಸ್‌ ಮನೆಯಲ್ಲಿ ದಿವಾಕರ್‌ ಹಾಗೂ ರಿಯಾಜ್‌ ನಡುವೆ ಜಗಳವಾಯಿತು. ದಿವಾಕರ್ ಹಾಗೂ ರಿಯಾಜ್‌ ನಡುವೆ ಅಣ್ಣ-ತಮ್ಮಂದಿರಲ್ಲಿರುವ ಪ್ರೀತಿಯಿತ್ತು. ದಿವಾಕರ್ ಏನೇ ತಪ್ಪು ಮಾಡಿದ್ರು ಅದನ್ನು ತಿದ್ದಿ, ತೀಡಿ, ತಿಳುವಳಿಕೆ ನೀಡುತ್ತ ಬಂದಿದ್ದಾರೆ ರಿಯಾಜ್‌. ಆದರೆ, ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳದ ದಿವಾಕರ್‌, ಊರುಗೋಲಾದವರನ್ನು ಕಡೆಗಣಿಸುತ್ತಿದ್ದಾನೆ ಎನ್ನುವ ಮನೋಭಾವನೆ ಎಲ್ಲರಲ್ಲೂ ಇದೆ. ಈ ವಿಷಯ ಈಗಾಗಲೇ ಸುದೀಪ್ ಅವರಿಗೂ ತಲುಪಿದೆ.

ಗುರುವಾರ ಆಟದ ವಿಷಯವಾಗಿ ರಿಯಾಜ್‌ ಹಾಗೂ ದಿವಾಕರ್ ನಡುವೆ ಜಗಳವಾಯಿತು. ನಿನ್ನಲ್ಲಿ ‘ನಾನು’ ಎನ್ನುವ ಅಹಂಕಾರ ತುಂಬಿ ತುಳುಕುತ್ತಿದೆ. ನಾನೇ ಬಿಗ್‌ಬಾಸ್‌ ಗೆಲ್ಲುತ್ತೇನೆ ಎನ್ನುವ ಭ್ರಮೆ ನಿನ್ನಲ್ಲಿದೆ. ನಿಮ್ಮನ್ನೆಲ್ಲ ಮನೆಯಿಂದ ಹೊರಗೆ ಕಳುಹಿಸಿ ನಾನು ಬರುತ್ತೇನೆ ಎನ್ನುವ ಮಾತುಗಳು ನಿನ್ನಿಂದ ಬರುತ್ತಿವೆ ಎಂದು ರಿಯಾಜ್ ಅವರು ದಿವಾಕರ್ ಅವರನ್ನು ತರಾಟೆಗೆ ತೆಗೆದುಕೊಂಡ್ರು. ಎಲ್ಲರಿಗೂ ಮರ್ಯಾದೆ ಕೊಟ್ಟು ಮಾತಾಡು, ಮಾನವೀಯತೆ ಸಂಬಂಧಗಳನ್ನು ಗೌರವಿಸು ಎಂದು ತಿಳಿ ಹೇಳುವ ಪ್ರಯತ್ನವನ್ನು ರಿಯಾಜ್ ಮಾಡಿದರು. ಈ ವೇಳೆ ದಿವಾಕರ್ ಮಾತ್ರ ತಣ್ಣಗಾಗಲಿಲ್ಲ. ರಿಯಾಜ್’ಗೆ ಇನ್ನಷ್ಟು ಕೋಪ ಬರುವಂತೆ ಮಾತನಾಡಿದರು.

ಈ ವೇಳೆ ರಿಯಾಜ್ ತನ್ನ ನೋವನ್ನೆಲ್ಲ ಮನೆಗೆ ಟೀಚರ್ ಆಗಿ ಬಂದಿರುವ ಶೀತಲ್ ಶೆಟ್ಟಿ ಹಾಗು ಜಯ ಶ್ರೀನಿವಾಸನ್ ಅವರ ಬಳಿ ತೋಡಿಕೊಂಡರೆ, ಇತ್ತ ದಿವಾಕರ್ ಅವರು ಚಂದನ್ ಶೆಟ್ಟಿ ಬಳಿ ಇದೆ ವಿಷಯದ ಕುರಿತು ದೂರು ನೀಡುತ್ತಿದ್ದರು. ಈ ವೇಳೆ ಚಂದನ್ ಶೆಟ್ಟಿ ಕೂಡ ದಿವಾಕರ್’ಗೆ ಕೆಲವೊಂದು ತಪ್ಪಿನ ಕುರಿತು ಮನವರಿಕೆ ಮಾಡುತ್ತಿದ್ದರು. ಆದರೆ ದಿವಾಕರ್ ತಾನೇನೆ ಮಾಡಿದರು ಅದೇ ಸರಿ ಎನ್ನುವ ಧಾಟಿಯಲ್ಲಿ ಮಾತನಾಡುತ್ತಿದ್ದರು.

ನಂತರ ರಿಯಾಜ್’ರನ್ನು ಸಮೀರ್ ಆಚಾರ್ಯ ಸಮಾಧಾನಿಸಿದರು. ನನಗೆ ಈ ಮನೆಯಲ್ಲಿ ನಿಮ್ಮ ಮೇಲಿರುವಷ್ಟು ಪ್ರೀತಿ-ವಿಶ್ವಾಸ ಬೇರೆಯವರಲ್ಲಿಲ್ಲ ಎಂದು ರಿಯಾಜ್ ಅವರು ಸಮೀರ್ ಆಚಾರ್ಯರಲ್ಲಿ ಹೇಳುತ್ತಿದ್ದರು. ಈಗ ಮನೆಯೆಲ್ಲ ಗೊಂದಲದ ಗೂಡಾಗಿದೆ. ಎರಡು ಪಾರ್ಟಿ ಇದ್ದ ಮನೆಯಲ್ಲಿ ಈಗ ಮೂರು ಪಾರ್ಟಿಯಾಗಿದೆ.

 

Comments are closed.