ಮನೋರಂಜನೆ

ಭಾರತ ಮಾತೆಯೇ, ದೀಪಿಕಾಳ ತಲೆ ಉಳಿಸು: ಕಮಲ್‌ ಭಿನ್ನಹ

Pinterest LinkedIn Tumblr


ಮುಂಬಯಿ: “ಭಾರತ ಮಾತೆಯೇ ನನ್ನ ಬಿನ್ನಹ ಆಲಿಸು, ದಯವಿಟ್ಟು ದೀಪಿಕಾಳ ತಲೆ ಉರುಳದಂತೆ ಅನುಗ್ರಹಿಸು’ ಎಂದು ತಮಿಳು ಸೂಪರ್‌ ಸ್ಟಾರ್‌ ಕಮಲ ಹಾಸನ್‌ ಭಾರತ ಮಾತೆಯಲ್ಲಿ ಮೊರೆ ಇಟ್ಟಿದ್ದಾರೆ.

ವಿವಾದಿತ “ಪದ್ಮಾವತಿ’ ಚಿತ್ರದಲ್ಲಿ ರಾಣಿ ಪದ್ಮಾವತಿ ಪಾತ್ರದಲ್ಲಿ ಅಭಿನಯಿಸಿರುವ ನಟಿ ದೀಪಿಕಾ ಪಡುಕೋಣೆಯ ತಲೆ ಕಡಿದವರಿಗೆ ಹತ್ತು ಕೋಟಿ ರೂ., ಜೀವಂತ ಸುಟ್ಟವರಿಗೆ ಐದು ಕೋಟಿ ರೂ. ಇನಾಮನ್ನು ಕೆಲವು ಕ್ಷುದ್ರ ಸಮೂಹಗಳು ಈಚೆಗೆ ಘೋಷಿಸುವ ಮೂಲಕ ದೀಪಾಕಾಗೆ ಪ್ರಾಣ ಬೆದರಿಕೆಯನ್ನು ಹಾಕಿದ್ದವು.

“ಭಾರತ ಮಾತೆಯೇ, ದಯವಿಟ್ಟು ದೀಪಿಕಾಳ ತಲೆ ಉಳಿಸುವಂತೆ ಮಾಡು’ ಎಂದು ಪ್ರಾರ್ಥಿಸುವ ಮೂಲಕ ನಟ ಕಮಲ ಹಾಸನ್‌ ಬಾಲಿವುಡ್‌ ನಟಿಯ ಬೆಂಬಲಕ್ಕೆ ನಿಂತಿದ್ದಾರೆ.

“ದೀಪಿಕಾ ಳಿಗೆ ಆಕೆಯ ಸ್ವಾತಂತ್ರ್ಯವನ್ನು ನಿರಾಕರಿಸಬೇಡಿ; ಆಕೆಯ ದೇಹಕ್ಕಿಂತಲೂ ಹೆಚ್ಚಿನ ಗೌರವವನ್ನು ವ್ಯಕ್ತಿಯಾಗಿ, ನಟಿಯಾಗಿ ಆಕೆಗೆ ನೀಡಿ’ ಎಂದು ಕಮಲ ಹಾಸನ್‌ ಜನರನ್ನು ಆಗ್ರಹಿಸಿದ್ದಾರೆ.

ಹರಿಯಾಣ ಭಾರತೀಯ ಜನತಾ ಪಕ್ಷದ ಮುಖ್ಯ ಮಾಧ್ಯಮ ಸಂಚಾಲಕ ಈಚೆಗೆ “ಪದ್ಮಾವತಿ’ ದೀಪಿಕಾಳ ಶಿರಚ್ಛೇದನ ಮಾಡುವ ಯಾರಿಗೇ ಆದರೂ ತಾನು ಹತ್ತು ಕೋಟಿ ಇನಾಮು ನೀಡುವೆ ಎಂದು ಹೇಳಿರುವುದಕ್ಕೆ ಪ್ರತಿಯಾಗಿ, ಇದೀಕ ರಾಜಕೀಯ ರಂಗಕ್ಕೆ ಧುಮುಕುವ ಸಿದ್ಧತೆಯಲ್ಲಿರುವ ಕಮಲ ಹಾಸನ್‌, ಭಾರತ ಮಾತೆಯಲ್ಲಿ ದೀಪಿಕಾಳ ತಲೆ ಉಳಿಸೆಂದು ಪ್ರಾರ್ಥಿಸಿದ್ದಾರೆ !

-ಉದಯವಾಣಿ

Comments are closed.