ಬಿಗ್ಬಾಸ್ ಮನೆಯಿಂದ ಈ ವಾರ ದಯಾಳ್ ಔಟ್ ಆಗಿದ್ದಾರೆ. ದಯಾಳ್ ಬಗ್ಗೆ ವೀಕ್ಷಕರಲ್ಲಿ ಕೆಟ್ಟ ಅಭಿಪ್ರಾಯವಿತ್ತು. ಅವರ ನಡೆ-ನುಡಿ ಬಗ್ಗೆ ವೀಕ್ಷಕರು ಟೀಕಿಸುತ್ತಲೇ ಇದ್ದು, ಜನರ ಬೆಂಬಲವನ್ನು ಕಳೆದುಕೊಂಡ ದಯಾಳ್ ಹೊರಬಿದ್ದಿದ್ದಾರೆ. ಅವರು ಔಟ್ ಆಗುತ್ತಿದ್ದಂತೆ ಬಾವುಕರಾಗಿ ಅಳುತ್ತಲೇ ಬಿಗ್ ಬಾಸ್ ಮನೆಯಿಂದ ಹೊರಬಂದರು.
ಈ ವಾರ ಮನೆಯಲ್ಲಿರುವ ಏಳು ಸ್ಪರ್ಧಿಗಳನ್ನು ನಾಮಿನೇಟ್ ಮಾಡಲಾಗಿತ್ತು. ಸಾಮಾನ್ಯ ಸ್ಪರ್ಧಿಗಳಾದ ರಿಯಾಜ್, ಜಯ ಶ್ರೀನಿವಾಸನ್, ನಿವೇದಿತಾ ಗೌಡ ಹಾಗೂ ಸೆಲೆಬ್ರಿಟಿ ಕಂಟೆಸ್ಟಂಟ್ಗಳಾದ ಅನುಪಮಾ ಹಾಗೂ ದಯಾಳ್ ಪದ್ಮನಾಭ್ ಅವರನ್ನು ನಾಮಿನೇಟ್ ಮಾಡಲಾಗಿತ್ತು. ದಿವಾಕರ್ ಹಾಗೂ ಶೃತಿ ಅವರನ್ನು ನೇರವಾಗಿ ಬಿಗ್ಬಾಸ್ ನಾಮಿನೇಟ್ ಮಾಡಿದ್ದರು.
ನಿನ್ನೆ ನಡೆದ ವಾರದ ಕತೆ ಕಿಚ್ಚನ ಜತೆಯಲ್ಲಿ ಎಲಿಮಿನೇಟ್ ಪ್ರಕ್ರಿಯೆ ನಡೆಯಿತು. ಮನೆಯಲ್ಲಿರುವ ಸ್ಪರ್ಧಿಗಳ ಕಷ್ಟಸುಖಗಳನ್ನು ವಿಚಾರಿಸಿಕೊಂಡ ಸುದೀಪ್, ಕೊನೆಯದಾಗಿ ಎಲಿಮಿನೇಟ್ ಕೆಲಸವನ್ನು ಪ್ರಾರಂಭಿಸಿದ್ರು. ಈ ವಾರ ಬಿಗ್ಬಾಸ್ ಮನೆಯಿಂದ ನಿವೇದಿತಾ ಗೌಡ, ಇಲ್ಲವೆ ರಿಯಾಜ್ ಹೊರಹೋಗಬಹುದು ಎನ್ನುವ ಲೆಕ್ಕಾಚಾರ ಎಲ್ಲರಲ್ಲೂ ಇತ್ತು. ಆದರೆ, ಈ ಲೆಕ್ಕಾಚಾರ ಉಲ್ಟಾ ಆಯಿತು.
ಮೊದಲಿಗೆ ಶೃತಿ ಅವರನ್ನು ಸೇಫ್ ಮಾಡಿದ ಸುದೀಪ್, ಬಳಿಕ ನಿವೇದಿತಾ, ಅನುಪಮಾ, ದಿವಾಕರ್ ಹಾಗೂ ಜಯ ಶ್ರೀನಿವಾಸನ್ ಅವರನ್ನು ಸೇಫ್ ಮಾಡಿದ್ರು. ಇನ್ನುಳಿದ ರಿಯಾಜ್ ಹಾಗೂ ದಯಾಳ್ ನಡುವೆ ಯಾರು ಮನೆಯಿಂದ ಹೊರ ಹೋಗಬೇಕು ಎನ್ನುವ ಅಭಿಪ್ರಾಯವನ್ನು ಮನೆಯವರಿಂದಲೇ ಪಡೆದುಕೊಂಡ್ರು ಸುದೀಪ್. ಬಳಿಕ ರಿಯಾಜ್ ಅವರನ್ನು ಸೇಫ್ ಮಾಡಿದ ಸುದೀಪ್, ದಯಾಳ್ ಅವರನ್ನು ಮನೆಯಿಂದ ಹೊರಗೆ ಕಳುಹಿಸಿದ್ರು.
ಇನ್ನು ಬಿಗ್ಬಾಸ್ ಮನೆಯಿಂದ ಮೂರನೇ ವಾರಕ್ಕೆ ಹೊರಗೆ ಬಂದ ದಯಾಳ್, ಭಾವುಕರಾದ್ರು. ಎಲ್ಲರನ್ನೂ ಅಪ್ಪಿಕೊಂಡು ಕಣ್ಣೀರು ಸುರಿಸಿದ್ರು. ಬಿಗ್ಬಾಸ್ ನಿಮಯದಂತೆ ಮುಂದಿನ ವಾರದ ಸೂಪರ್ ಅಧಿಕಾರವನ್ನು ಸಮೀರ್ ಆಚಾರ್ಯ ಅವರಿಗೆ ನೀಡಿ ಹೊರ ನಡೆದ್ರು.
Comments are closed.