ಮುಂಬೈ: ಬಾಲಿವುಡ್ನ ಹಾಟ್ ರೊಮ್ಯಾಂಟಿಕ್ ಜೋಡಿ ಶ್ರದ್ಧಾ ಕಪೂರ್ ಮತ್ತು ಆದಿತ್ಯಾ ರಾಯ್ ಕಪೂರ್ ಜೋಡಿ ಮತ್ತೊಮ್ಮೆ ಬೆಳ್ಳಿ ತೆರೆಯಲ್ಲಿ ರೊಮಾನ್ಸ್ ಮಾಡಲು ಬರುತ್ತಿದ್ದಾರೆ.
ಏಕ್ ವಿಲನ್ ಮತ್ತು ಆಶಿಕಿ–2 ಸಿನಿಮಾದ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಶ್ರದ್ಧಾ ಈಗ ‘ಓಕೆ ಜಾನು’ ಮುಖಾಂತರ ಮತ್ತೊಮ್ಮೆ ಪಡ್ಡೆ ಹುಡುಗರ ಹೃದಯಕ್ಕೆ ಲಗ್ಗೆ ಇಡಲು ರೆಡಿಯಾಗಿದ್ದಾರೆ. ಹುಡುಗಿಯರ ಹಾಟ್ ಫೇವರಿಟ್ ಹೀರೊ ಆದಿತ್ಯಾ ರೇ ಕಪೂರ್ ಶ್ರದ್ಧಾಗೆ ಜೊತೆಯಾಗಿದ್ದಾರೆ.
ತಮಿಳಿನ ಸ್ಟಾರ್ ನಿರ್ದೇಶಕ ಮಣಿರತ್ನಂ ನಿರ್ದೇಶನದ ‘ಓಕೆ ಕಣ್ಮಣಿ’ ಸಿನಿಮಾದ ರಿಮೇಕ್ ಚಿತ್ರ ಇದಾಗಿದೆ. 2015ರಲ್ಲಿ ತಮಿಳು ಮತ್ತು ತೆಲುಗಿನಲ್ಲಿ ತೆರೆಕಂಡಿದ್ದ ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಇದರಲ್ಲಿ ನಿತ್ಯಾ ಮೆನನ್ ಮತ್ತು ಡಿ. ಸಲ್ಮಾನ್ ನಟಿಸಿದ್ದರು.
‘ಓಕೆ ಜಾನು’ ಚಿತ್ರವನ್ನು ಶಾದ್ ಆಲಿ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರತಂಡ ಮೊದಲ ಟೀಸರ್ ಬಿಡುಗಡೆ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಯೂಟ್ಯೂಬ್ನಲ್ಲಿ ಈ ಚಿತ್ರದ ಟೀಸರ್ ಅನ್ನು 91 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಫೇಸ್ಬುಕ್ ಮತ್ತು ಟ್ವಿಟ್ಟರ್ನಲ್ಲೂ ಲಕ್ಷಾಂತರ ಜನರು ಲೈಕ್ ಮಾಡಿದ್ದಾರೆ.
ಗುಲ್ಜಾರ್ ಅವರ ಸಾಹಿತ್ಯಕ್ಕೆ ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ರಾಗ ಸಂಯೋಜನೆ ಮಾಡಿದ್ದಾರೆ. ಹಾಡುಗಳ ಜೊತೆಗೆ ಗುಲ್ಜಾರ್ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಮಣಿರತ್ನಂ ಮತ್ತು ಕರಣ್ ಜೋಹರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಶ್ರದ್ಧಾ ಮತ್ತು ಆದಿತ್ಯಾ ಅವರ ಕೆಮಿಸ್ಟ್ರಿ ಈ ಚಿತ್ರದಲ್ಲಿ ಯಾವ ರೀತಿ ಮೂಡಿಬಂದಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.
ಜನವರಿ ತಿಂಗಳಲ್ಲಿ ‘ಓಕೆ ಜಾನು’ ಚಿತ್ರ ಬಿಡುಗಡೆಯಾಗುವ ಸಾಧ್ಯತೆಗಳಿವೆ.
Comments are closed.