ನವದೆಹಲಿ: ಕೇಂದ್ರ ಬಿಜೆಪಿ ಎರಡು ವರ್ಷ ಅಧಿಕಾರಾವಧಿ ಪೂರೈಸಿದ ಹಿನ್ನೆಲೆಯಲ್ಲಿ ದೆಹಲಿಯ ಐತಿಹಾಸಿಕ ಇಂಡಿಯಾ ಗೇಟ್ ಬಳಿ ಮೆಗಾ ಶೋ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಭಾಗಿಯಾಗಿದ್ದಾರೆ.
ಕೇಂದ್ರ ಸರಕಾರದ ಮಹತ್ವದ ಯೋಜನೆಯಾದ ಬೇಟಿ ಬಜಾವೋ ಬೇಟಿ ಪಢಾವೋ ಯೋಜನೆಯ ಕುರಿತು ಮಾತನಾಡಿದ ಬಾಲಿವುಡ್ ನಟ ಅಮಿತಾಭ್ ಬಚ್ಚನ್, ಸ್ತ್ರೀ-ಪುರುಷರ ಜನ್ಮ ಅನುಪಾತ ಸಮವಾಗಿರಬೇಕು. ಪಾಲಕ ಪೋಷಕರಲ್ಲಿ ಮಗ-ಮಗಳು ಎಂಬ ಭೇದಭಾವ ಇರಬಾರದು, ಮಗ-ಮಗಳು ಇಬ್ಬರಿಗೂ ಸಮನಾದ ಹಕ್ಕುಗಳು ದೊರೆಯಬೇಕು ಎಂದು ಹೇಳಿದರು.
ಎಲ್ಲಿ ನಾರಿಯರನ್ನು ಪೂಜಿಸಲಾಗತ್ತೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಸದೃಡ ದೇಶ ನಿರ್ಮಾಣವಾಗಲು ಮಹಿಳೆಯರು ಕೈಜೊಡಿಸುವಂತಾಗಬೇಕು ಎಂದು ನಟ ಅಮಿತಾಬ್ ಬಚ್ಚನ್ ಹೇಳಿದ್ದಾರೆ.
Comments are closed.