ನವದೆಹಲಿ: ಸೆ.20 ರಂದು ನಿಧನರಾದ ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ, ವನ್ ಮುಕ್ತ ಕಣ್ಣಿನ ಬ್ಯಾಂಕ್ ಗೆ ನೇತ್ರದಾನ ಮಾಡಿದ್ದಾರೆ. ವನ್ ಮುಕ್ತ ಕಣ್ಣಿನ ಬ್ಯಾಂಕ್, ಸುಶ್ರುತ ಐ ಫೌಂಡೇಷನ್ ನ ಭಾಗವಾಗಿದೆ.
ದಾಲ್ಮಿಯಾ ಅವರ ನೇತ್ರದಾನದ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಬಿಸಿಸಿಐ, ಈ ಹಿಂದೆ ದಾಲ್ಮಿಯಾ ಅವರೇ ಆಸಕ್ತಿ ವಹಿಸಿ ಪ್ರಾರಂಭಿಸಿದ್ದ ‘ಅಂಧತ್ವ ನಿರ್ಮೂಲನೆ’ ಕಾರ್ಯಕ್ರಮವನ್ನು ಸ್ಮರಿಸಿದೆ.
ದಿವಂಗತ ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರು ಪ್ರಾರಂಭಿಸಿದ್ದ ಅಂಧತ್ವ ನಿರ್ಮೂಲನೆ ಕಾರ್ಯಕ್ರಮ, ಕ್ರಿಕೆಟ್ ಫಾರ್ ಲೈಫ್ ಬಿಯಾಂಡ್ ಡೆತ್, ಚಾನ್ಸ್ ಆಫ್ ಸೆಕೆಂಡ್ ಇನ್ನಿಂಗ್ಸ್ ಎಂದೇ ಖ್ಯಾತಿ ಪಡೆದಿತ್ತು.