ಲಕ್ನೋ: ಬಾಲಿವುಡ್ ಪ್ರಸಿದ್ಧ ನಟ ಸನ್ನಿ ಡಿಯೋಲ್ ಪ್ರಧಾನ ಭೂಮಿಕೆಯಲ್ಲಿ ನಟಿಸಿರುವ ಮುಂದಿನ ಚಿತ್ರ ಮೊಹಲ್ಲಾ ಅಸ್ಸಿ ಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಸನ್ನಿ ಡಿಯೋಲ್ ಹಾಗೂ ನಿರ್ದೇಶಕ ಚಂದ್ರ ಪ್ರಕಾಶ್ ದ್ವಿವೇದಿ ವಿರುದ್ಧ ದೂರು ದಾಖಲಾಗಿದೆ.
ಸರ್ವಜನ ಜಾಗೃತಿ ಸಂಸ್ಥೆ ಬೇಲುಪುರ್ ಪೊಲೀಸ್ ಠಾಣೆಯಲ್ಲಿ ನಟ ಹಾಗೂ ನಿರ್ದೇಶಕರ ವಿರುದ್ಧ ದೂರು ದಾಖಲಿಸಿ, ಚಿತ್ರದಲ್ಲಿ ವಾರಣಾಸಿಯನ್ನು ನಿಕೃಷ್ಟವಾಗಿ ತೋರಿಸಲಾಗಿದೆ. ಮತ್ತು ನೈತಿಕತೆಯನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದೆ. ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆಗೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಸಂಘಟನೆ ತಿಳಿಸಿದೆ.
ಲೇಖಕ ಕಾಶಿನಾಥ್ ಸಿಂಗ್ ಅವರ ಕಾಶಿ ಕಾ ಅಸ್ಸಿ ಎಂಬ ಕಾದಂಬರಿ ಆಧರಿಸಿ ಸಿನಿಮಾ ತಯಾರಿಸಲಾಗುತ್ತಿದ್ದು, ಚಿತ್ರದಲ್ಲಿ ರವಿ ಕಿಶನ್ ಹಾಗೂ ಸಾಕ್ಷಿ ತನ್ವಾರ್ ಅಭಿನಯಿಸಿದ್ದಾರೆ.
ಚಿತ್ರದಲ್ಲಿ ಸನ್ನಿ ಡಿಯೋಲ್ ಸಾಂಪ್ರಾದಾಯಿಕ ಕುಟಂಬದ ಸಂಸ್ಕೃತ ಶಿಕ್ಷಕನ ಪಾತ್ರ ನಿರ್ವಹಿಸಿದ್ದಾರೆ. ಮಡಿವಂತ ಕುಟುಂಬದ ಸಂಸ್ಕೃತ ಪಂಡಿತನ ಪತ್ನಿಯಾಗಿ ಸಾಕ್ಷಿ ತನ್ವಾರ್ ನಟಿಸಿದ್ದಾರೆ