ಮನೋರಂಜನೆ

ಮೈಸೂರಿಗೆ ವಿಷ್ಣು ಸಮಾಧಿ ವರ್ಗಾವಣೆಯಾಗಲ್ಲ: ಭಾರತಿ

Pinterest LinkedIn Tumblr

bharathi

ಬೆಂಗಳೂರು; ಸ್ಯಾಂಡಲ್‌ವುಡ್‌ನ ಖ್ಯಾತ ನಟ, ದಿ. ಡಾ.ವಿಷ್ಣುವರ್ಧನ್ ಅವರ ಸಮಾಧಿಯನ್ನು ಮೈಸೂರಿಗೆ ವರ್ಗಾಯಿಸುವುದಿಲ್ಲ ಎಂದು ಅವರ ಧರ್ಮಪತ್ನಿ ಭಾರತಿ ವಿಷ್ಣುವರ್ಧನ್ ಅವರು ನಗರದಲ್ಲಿ ಇಂದು ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲ ಕಾನೂನು ತೊಡಕುಗಳಿದ್ದರಿಂದ ಸಮಾಧಿಯನ್ನು ಬೆಂಗಳೂರಿನಿಂದ ಮೈಸೂರಿಗೆ ಸ್ಥಳಾಂತರಿಸಲು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೆ. ಅದಕ್ಕೆ ಸಿಎಂ ಕೂಡ ಸಮ್ಮತಿ ಸೂಚಿಸಿದ್ದರು. ಆದರೆ ಅಭಿಮಾನಿಗಳು ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಸಮಾಧಿಯನ್ನು ವರ್ಗಾಯಿಸುವ ನಿರ್ಧಾರವನ್ನು ಕೈಬಿಡಲಾಗಿದೆ ಎಂದರು.

ಇದೇ ವೇಳೆ, ಅಭಿಮಾನಿಗಳಿಗೋಸ್ಕರ ತಮ್ಮ ನಿರ್ಧಾರವನ್ನು ಬದಲಿಸದ್ದು, ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ಹಾಗೂ ದ್ಯಾನ ಮಂದಿರವನ್ನು ನಿರ್ಮಿಸಲಿದ್ದೇವೆ. ಆದರೆ ಸಮಾಧಿ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿಯೇ ಇರಲಿದೆ ಎಂದು ಸ್ಪಷ್ಟಪಡಿಸಿದರು.

ಕೆಲ ಕಾನೂನು ತೊಡಕುಗಳಿದ್ದ ಕಾರಣ ಸಮಾಧಿಯನ್ನು ಮೈಸೂರಿಗೆ ವರ್ಗಾಯಿಸುತ್ತಿದ್ದು, ಅಲ್ಲಿಯೇ ಸ್ಮಾರಕವನ್ನು ನಿರ್ಮಿಸಲಿದ್ದೇವೆ ಎಂದು ಭಾರತಿ ವಿಷ್ಣು ವರ್ಧನ್ ಅವರೇ ಈ ಹಿಂದೆ ತಿಳಿಸಿದ್ದರು.

Write A Comment