ಮುಂಬೈ (ಮೇ 31): ಮಹಾರಾಷ್ಟ್ರಕ್ಕೆ ಕೊರೋನಾ ವೈರಸ್ ದುಸ್ವಪ್ನದಂತೆ ಕಾಡುತ್ತಲೇ ಇದೆ. ಕಳೆದ ಎರಡು ತಿಂಗಳಿಂದ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಈ ಮಧ್ಯೆ ಐಸಿಯುನಲ್ಲಿದ್ದ ಕೊರೋನಾ ರೋಗಿಗಳು ಆಮ್ಲಜನಕ ಇಲ್ಲದೆ ಮೃತಪಡುತ್ತಿದ್ದು, ಅಲ್ಲಿನ ಆಸ್ಪತ್ರೆ ವೈದ್ಯರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.
ಜೋಗೇಶ್ವರಿ ಆಸ್ಪತ್ರೆಯಲ್ಲಿ ಕೇವಲ ಒಂದುವರೆ ಗಂಟೆಯಲ್ಲಿ 7 ಕೊರೋನಾ ರೋಗಿಗಳು ಮೃತಪಟ್ಟಿದ್ದಾರೆ. ಈ ಬಗ್ಗೆ ಆಸ್ಪತ್ರೆಯ ವೈದ್ಯರು ಹಾಗೂ ನರ್ಸ್ಗಳು ಅಚ್ಚರಿ ವ್ಯಕ್ತಪಡಿಸಿದ್ದು, ಈ ರೀತಿಯ ಘಟನೆ ಹಿಂದೆಂದೂ ನಡೆದೇ ಇರಲಿಲ್ಲ ಎಂದಿದ್ದಾರೆ.
ಇಷ್ಟು ದೊಡ್ಡ ಪ್ರಮಾಣದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ನಮ್ಮ ಬಳಿ ಸರಿಯಾದ ಉಪಕರಣ ಇಲ್ಲ. ಇದು ರೋಗಿಗಳು ಮೃತಪಡಲು ಪ್ರಮುಖ ಕಾರಣ. ಸರಿಯಾದ ಕಿಟ್ಗಳನ್ನು ಪೂರೈಕೆ ಮಾಡಿದರೆ ನಾವು ರೋಗಿಗಳನ್ನು ಬದುಕಿಸಬಹುದು. ಇಲ್ಲದಿದ್ದರೆ ಅವರು ಮೃತಪಡುತ್ತಾರೆ ಎನ್ನುತ್ತಾರೆ ನರ್ಸ್ಗಳು.
ಇನ್ನು, ಈ ಬಗ್ಗೆ ಮಾತನಾಡುವ ವೈದ್ಯರು ಈ ಆಸ್ಪತ್ರೆಯಲ್ಲಿ ಕೆಲಸ ಮಾಡಲ ಇಷ್ಟವೇ ಇಲ್ಲ ಎನ್ನುವ ಮಾತನ್ನು ಹೇಳುತ್ತಾರೆ. ಸರಿಯಾದ ಆಮ್ಲಜನಕ ಪೂರೈಕೆ ಇಲ್ಲ. ಇಂಥ ಆಸ್ಪತ್ರೆಗಳಲ್ಲಿ ಕೆಲಸ ಮಾಡುವುದು ತುಂಬಾನೇ ಕಷ್ಟ. ನಂತರ ನಾವು ತಪ್ಪನ್ನು ಹೊರಬೇಕಾಗುತ್ತದೆ. ಇದು ಅಸಾಧ್ಯ ಎನ್ನುತ್ತಾರೆ ವೈದ್ಯರು.
Comments are closed.