ಮುಂಬೈ

ಪೋಷಕರ ಮೊಬೈಲ್‌ನಲ್ಲಿ ನೀಲಿ ಚಿತ್ರ ವೀಕ್ಷಿಸಿ , 10 ವರ್ಷದ ಗೆಳೆಯನ ಕೊಂದ ಬಾಲಕ

Pinterest LinkedIn Tumblr


ಮುಂಬಯಿ: ಪೋಷಕರ ಮೊಬೈಲ್‌ನಲ್ಲಿ ನೀಲಿ ಚಿತ್ರ ವೀಕ್ಷಿಸಿದ 15 ವರ್ಷದ ಬಾಲಕನೊಬ್ಬ 10 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಹತ್ಯೆಗೈದ ಬೆಚ್ಚಬೀಳಿಸುವ ಘಟನೆ ಮುಂಬಯಿಯಲ್ಲಿ ನಡೆದಿದೆ.

ಬಾಲಕನ ಗುರುವಾರ ಕೊಲೆಗೈಯ್ಯಲಾಗಿತ್ತು. ಆತನ ಶವ ಶನಿವಾರ ದಿನ ಸಪೇದ್ ಪುಲ್ ನಾಲಾದಲ್ಲಿ ತೇಲುತ್ತಿದ್ದ ಟ್ರಾಲಿ ಬ್ಯಾಗೊಂದರಲ್ಲಿ ಪತ್ತೆಯಾಗಿತ್ತು.

ನಾನು ತಂದೆ-ತಾಯಿ ಮೊಬೈಲ್‌ನನ್ನು ಗೇಮ್ ಆಡಲು ಬಳಸುತ್ತಿದ್ದೆ. ಒಂದು ಸಲ ಮೊಬೈಲ್‌ನಲ್ಲಿ ನೀಲಿ ಚಿತ್ರ ನೋಡಿದ ನಾನು ಬಳಿಕ ಆಗ್ಗಾಗ್ಗೆ ನೋಡುತ್ತಲೇ ಇದ್ದೆ . ಅದೇ ನನಗೆ ಗೆಳೆಯನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಪ್ರೇರಣೆಯಾಯಿತು ಎಂದು ಆತ ಪೊಲೀಸ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.

ಆರೋಪಿ ಮತ್ತು ಮೃತ ಬಾಲಕ ನೆರೆಹೊರೆಯವರಾಗಿದ್ದು ಗುರುವಾರ ಆತನನ್ನು ಸಾರ್ವಜನಿಕ ಶೌಚಾಲಯಕ್ಕೆ ಕರೆದೊಯ್ದ ಬಾಲಕ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದೆ. ಆದರೆ ಆತ ಕಿರುಚಿಕೊಂಡಿದ್ದರಿಂದ ಹತ್ಯೆಗೈದೆ ಎಂದಾತ ಹೇಳಿದ್ದ. ಆದರೆ ಕೊನೆಗೆ ಕೃತ್ಯ ನಡೆದಿರುವುದು ಆರೋಪಿ ಮನೆಯಲ್ಲಿಯೇ ಎಂಬುದು ಬೆಳಕಿಗೆ ಬಂದಿದೆ.

ಗುರುವಾರ ಸಂಜೆ 5.30 ರ ಸುಮಾರಿಗೆ ಮನೆಪಾಠಕ್ಕೆಂದು ಹೋಗುತ್ತಿದ್ದ ಬಾಲಕನನ್ನು ಕರೆದು ಮನೆಯೊಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಲು ಪ್ರಯತ್ನಿಸಿದ್ದಾನೆ. ಆತ ಕಿರುಚಿಕೊಂಡಾಗ ಭಯ ಪಟ್ಟ ಆರೋಪಿ 15-20 ನಿಮಿಷ ಆತನ ಕುತ್ತಿಗೆಯನ್ನು ಬಲವಾಗಿ ಅಮುಕಿ ಹಿಡಿದಿದ್ದಾನೆ. ಸತ್ತಿದ್ದಾನೆ ಎಂದು ಖಚಿತವಾದ ಮೇಲೆ ಆತನ ಶರ್ಟ್ ಬಿಚ್ಚಿ ಟ್ರಾಲಿ ಬ್ಯಾಗ್‌ನಲ್ಲಿ ಶವವನ್ನಿಟ್ಟು ಸ್ನೇಹಿತನ ಬೈಕ್ ಮೇಲೆ ಅದನ್ನು ಒಯ್ದು ನಾಲೆಗೆಸೆದಿದ್ದಾನೆ. ತನಿಖೆಯ ದಿಕ್ಕು ತಪ್ಪಿಸಲು ಮೃತನ ಶರ್ಟ್ ಮತ್ತು ಸ್ಕೂಲ್ ಬ್ಯಾಗ್‌ನ್ನು ಹತ್ತಿರದ ಸಾರ್ವಜನಿಕ ಶೌಚಾಲಯದಲ್ಲಿ ಅಡಗಿಸಿಟ್ಟಿದ್ದಾನೆ.

ಹುಡುಕಾಡುವ ನಾಟಕ

ರಾತ್ರಿಯಾದರೂ ಮನೆಗೆ ಬಾರದ ಬಾಲಕನನ್ನು ಹುಡುಕಾಡುತ್ತಿದ್ದ ಕುಟುಂಬದವರ ಜತೆ ತಾನು ಕೂಡ ಹುಡುಕಾಡುವ ನಾಟಕವಾಡಿದ್ದಾನೆ.

ಅಪಹರಣದ ನಾಟಕ

ಅಷ್ಟೇ ಅಲ್ಲ ಗೆಳೆಯನೊಬ್ಬನಿಗೆ ಫೋನ್ ಕರೆ ಮಾಡಿ ಬಾಲಕನನ್ನು ಅಪಹರಿಸಿರುವೆ, ಆತನ ಬಿಡುಗಡೆಗೆ 5 ಲಕ್ಷ ನೀಡು ಎಂದು ಮೃತನ ತಂದೆಗೆ ಫೋನ್ ಕರೆ ಮಾಡು. ಅದಕ್ಕಾಗಿ ನಿನಗೆ 20,000 ಕೊಡುತ್ತೇನೆ ಎಂದು ಪುಸಲಾಯಿಸಿ ಒಪ್ಪಿಸಿದ್ದ.

ಸಿಮ್ ಕಾರ್ಡ್ ನಾಶ

ಟಿವಿಯಲ್ಲಿ ಕ್ರೈಂ ಶೋ ಹೆಚ್ಚಾಗಿ ವೀಕ್ಷಿಸುತ್ತಿದ್ದ ಆತ ಮತ್ತು ಆತನ ಗೆಳೆಯ ಸಂಭಾಷಣೆಗೆ ಬಳಸಿದ್ದ ಸಿಮ್ ಕಾರ್ಡ್‌ನ್ನು ನಾಶ ಪಡಿಸಿದ್ದರು.

ಅನೋನ್ಯವಾಗಿತ್ತು ಕುಟುಂಬ

ಎರಡು ಕುಟುಂಬದವರು ಪರಷ್ಪರ ಅನೋನ್ಯವಾಗಿದ್ದರು. ಬಲಿಪಶು ಬಾಲಕ ಚೈನೀಸ್ ಆಹಾರವನ್ನು ಇಷ್ಟಪಟ್ಟು ತಿನ್ನುತ್ತಿದ್ದರಿಂದ ಆರೋಪಿ ಬಾಲಕನ ಕುಟುಂಬ ಸದಾ ಆತನಿಗೆ ಅದನ್ನು ತಯಾರಿಸಿ ನೀಡುತ್ತಿತ್ತು ಎಂದು ನೆರೆಹೊರೆಯವರು ತಿಳಿಸಿದ್ದಾರೆ.

ಯಾರ ಸಹಾಯವಿಲ್ಲದೇ ಹತ್ಯೆಗೈದು, ಬ್ಯಾಗ್‌ನಲ್ಲಿ ತುಂಬಿ , ಜನನಿಬಿಡ ಪ್ರದೇಶದಲ್ಲಿ ಯಾರ ಕೈಗೂ ಸಿಕ್ಕಿ ಬೀಳದೆ ಆತ ಶವ ಸಾಗಿಸಿದ್ದು ಹೇಗೆಂಬುದೇ ಈಗ ಯಕ್ಷಪ್ರಶ್ನೆಯಾಗಿದೆ ಎಂದು ಮೃತನ ಸಂಬಂಧಿಕರು ತಿಳಿಸಿದ್ದಾರೆ.

Comments are closed.