ಕರ್ನಾಟಕ

ಏಷ್ಯಾದಲ್ಲಿಯೇ ಭಾರತ ಭ್ರಷ್ಟಾಚಾರದಲ್ಲಿ ನಂಬರ್ 1: ಅಣ್ಣಾ ಹಜಾರೆ

Pinterest LinkedIn Tumblr


ಕೊಪ್ಪಳ: ಏಷ್ಯಾದಲ್ಲಿಯೇ ಭಾರತ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಇದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೋರ್ಬ್ಸ್ ವರದಿಯಿಂದ ಭ್ರಷ್ಟಾಚಾರ ಕುರಿತ ಮಾಹಿತಿ ಬಹಿರಂಗವಾಗಿದೆ. ಪ್ರಧಾನಿ ನರೇಂದ್ರ ಮೋದಿ ಆಡಳಿತಕ್ಕೆ ಬಂದು ಮೂರುವರೆ ವರ್ಷವಾದರೂ, ದೇಶದಲ್ಲಿ ಭ್ರಷ್ಟಾಚಾರ ತಡೆಯೋಕೆ ಮುಂದಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸದೃಢ ಜನಲೋಕಪಾಲ ಜಾರಿಗೆ ಮತ್ತೆ ಹೋರಾಟ ಮಾಡುತ್ತೇನೆ. ಮಹದಾಯಿ ವಿಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷದವರು ರಾಜಕಾರಣ ಮಾಡುತ್ತಿದ್ದಾರೆ. ಮಲಗಿದವರನ್ನು ಎಬ್ಬಿಸಬಹುದು. ಆದರೆ, ಮಲಗಿದಂತೆ ನಾಟಕವಾಡುತ್ತಿರುವವರನ್ನು ಎಬ್ಬಿಸಲು ಸಾಧ್ಯವಿಲ್ಲ ಎಂದು ರಾಜಕೀಯ ಮುಂಖಡರ ವಿರುದ್ಧ ಅಣ್ಣಾ ಹಜಾರೆ ಚಾಟಿ ಬೀಸಿದರು.

Comments are closed.