ಮುಂಬೈ

ಸರ್ಜಿಕಲ್ ದಾಳಿ ನಕಲಿ: ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್

Pinterest LinkedIn Tumblr

sanjay-nirupamಮುಂಬೈ: ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಿದ ಸೀಮಿತ ದಾಳಿ ನಕಲಿ ಎಂದು ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ಹೇಳಿದ್ದಾರೆ.
ಪ್ರತಿಯೊಬ್ಬ ಭಾರತೀಯನಿಗೂ ಪಾಕಿಸ್ತಾನ ವಿರುದ್ಧ ಸೀಮಿತಿ ದಾಳಿ ಬೇಕಿದೆ. ಆದರೆ ಅದು ನಕಲಿ ಸೀಮಿತ ದಾಳಿಯಾಗಿರಬಾರದು ಎಂದು ನಿರುಪಮ್ ಟ್ವೀಟಿಸಿದ್ದು, ಭಾರತೀಯರ ಉದ್ದೇಶವನ್ನು ಬಿಜೆಪಿ ತಮ್ಮ ರಾಜಕೀಯವಾಗಿ ಬೆಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
View image on TwitterView image on Twitter
Follow
Sanjay Nirupam @sanjaynirupam
Every Indian wants #SurgicalStrikesAgainstPak but not a fake one to extract just political benefit by #BJP.
Politics over national interest
12:32 PM – 4 Oct 2016 · Mumbai, India, India
394 394 Retweets 270 270 likes
ಸೀಮಿತ ದಾಳಿಗೆ ಸಂಬಂಧಪಟ್ಟ ಆಧಾರಗಳನ್ನು ಸರ್ಕಾರ ಬಿಡುಗಡೆ ಮಾಡುವವರೆಗೂ ಇದು ನಕಲಿ ದಾಳಿ ಎಂದು ಭಾವಿಸಬೇಕಾಗುತ್ತದೆ ಎಂದರು.
ಉರಿ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳದೆ ಬಿಡುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದರು. ಇದಾದ ಕೆಲ ದಿನಗಳಲ್ಲೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಯೋಧರು ಸೀಮಿತ ದಾಳಿ ನಡೆಸಿ ಏಳು ಉಗ್ರರ ಶಿಬಿರಗಳನ್ನು ಧ್ವಂಸಮಾಡಿ ಹಿಂತಿರುಗಿದ್ದರು.

Comments are closed.