ಕರ್ನಾಟಕ

ವಿದ್ಯಾರ್ಥಿಗಳ ಅಪಹರಣ: ಆತ್ಮರಕ್ಷಣೆಗೆ ಪೊಲೀಸರು ಅಪಹರಣಕಾರರ ಕಾಲಿಗೆ ಗುಂಡು

Pinterest LinkedIn Tumblr


ಬೆಂಗಳೂರು: ವಿದ್ಯಾರ್ಥಿಗಳಿಬ್ಬರನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಮೂವರನ್ನು ಕಡಬಗೆರೆ ಬಳಿ ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. ಬಂಧನದ ವೇಳೆ ಆತ್ಮರಕ್ಷಣೆಗೆ ಪೊಲೀಸರು ಅಪಹರಣಕಾರರ ಕಾಲಿಗೆ ಗುಂಡು ಹೊಡೆದ ಘಟನೆಯೂ ನಡೆದಿದೆ.

ನಗರದ ಕಾಲೇಜೊಂದರಲ್ಲಿ ಪದವಿ ಪೂರ್ವ ಶಿಕ್ಷಣ ಪಡೆಯುತ್ತಿದ್ದ ಶ್ರೇಯಸ್‌ ಮತ್ತು ಹೇಮಂತ್‌ ಅಪಹರಣವಾದ ವಿದ್ಯಾರ್ಥಿಗಳು. ಅವರಿಬ್ಬರನ್ನು ಆಗಸ್ಟ್‌ 26ರಂದು ಅಪಹರಿಸಲಾಗಿತ್ತು.

ಸಂಗುಬಾಳ, ಪ್ರಶಾಂತ್‌ ಮತ್ತು ಸತೀಶ್‌ ಬಂಧಿತ ಅಪಹರಣಕಾರರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಅಪಹರಣಕಾರರು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದರು. ಈ ವೇಳೆಗೆ ಅಪಹರಣಕಾರರ ಕಾಲಿಗೆ ಗುಂಡು ಹೊಡೆದು ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

Comments are closed.