ಕೋಲಾರ: ಮುಂದಿನ ಚುನಾವಣೆಯಲ್ಲಿ ನಮ್ಮ ದಾರಿ ನಮ್ಗೆ, ಜೆಡಿಎಸ್ ದಾರಿ ಅವರಿಗೆ ಎಂದು ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಹೇಳಿದ್ದಾರೆ.
ಮಾಲೂರಿನ ವಿಶ್ವನಾಥ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸನ್ಮಾನ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಾವು ಜೆಡಿಎಸ್ಗೂ ಸಪೋರ್ಟ್ ಮಾಡಿಲ್ಲ, ನಮ್ಗೆ ಜೆಡಿಎಸ್ ಕೆಲಸ ಮಾಡಿಲ್ಲ. ಎರಡು ಕಡೆಯ ನಾಯಕರು ಪೂರ್ತಿ ಪ್ರಮಾಣದಲ್ಲಿ ಕೆಲಸ ಮಾಡಲಿಲ್ಲ ಎಂದು ಅವರು ನುಡಿದರು.
ಇನ್ನು ಎರಡು ಪಕ್ಷಗಳು ಎಂದೂ ಊಹಿಸದ ಸೋಲು ಲೋಕಸಭೆ ಚುನಾವಣೆಯಲ್ಲಿ ಖಂಡಿದೆ. ಮತದಾರರು ಒಂದಾಗದ ಕಾರಣ ಮುಂದಿನ ಚುನಾವಣೆಯಲ್ಲಿ ಮೈತ್ರಿ ಇಲ್ಲ ಮುಂದಿನ ಚುನಾವಣೆಯಲ್ಲಿ ನಾವು ಗೆಲ್ತೀವಿ. ತ್ರಿಕೋನ ಸ್ಪರ್ಧೆ ಇದ್ರೆ ಬಿಜೆಪಿ ಮೂರನೇ ಸ್ತಾನಕ್ಕೆ ಭದ್ರವಾಗಿರುತ್ತದೆ. ಮೈತ್ರಿ ಸರ್ಕಾರಕ್ಕೆ ಯಾವುದೆ ಸಮಸ್ಯೆಯಿಲ್ಲ, ಸರ್ಕಾರ ೫ ವರ್ಷ ಭದ್ರವಾಗಿರುತ್ತೇ ಎಂದರು.
ರೋಷನ್ ಬೇಗ್ ಒಬ್ಬ ಕಾಂಗ್ರೆಸ್ನ ಹಿರಿಯ ಅಲ್ಪಸಂಖ್ಯಾತ ಮುಖಂಡರು. ಅವರನ್ನು ಪಕ್ಷದಿಂದ ಸಸ್ಪೆಂಡ್ ಮಾಡಿದ್ದು ಸಮಂಜಸವಲ್ಲ ಎಂದು ಮಾಜಿ ಸಂಸದ ಕೆ.ಹೆಚ್ ಮುನಿಯಪ್ಪ ರೋಷನ್ ಬೇಗ್ ಪರ ಬ್ಯಾಟ್ ಬೀಸಿದ್ದಾರೆ.
Comments are closed.