ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರೋ ಕಾಂಗ್ರೆಸ್ ಪಾತಾಳ ಸೇರಿದೆ. ಕೇವಲ ಒಂದೇ ಒಂದು ಸೀಟ್ ಗೆದ್ದಿರೋ ಕಾಂಗ್ರೆಸ್ ಕುಗ್ಗಿ ಹೋಗಿದೆ.
ಪಕ್ಷವನ್ನು ಮತ್ತೆ ಪುಟಿದೇಳುವಂತೆ ಮಾಡೋಕೆ ಎಐಸಿಸಿ ಅಧ್ಯಕ್ಷ ರಾಹುಲ್ ಮುಂದಾಗಿದ್ದಾರೆ. ಇದರ ಮೊದಲ ಭಾಗವಾಗಿಯೇ ಎಲ್ಲಾ ರಾಜ್ಯಗಳ ಕೆಪಿಸಿಸಿ ಅಧ್ಯಕ್ಷರನ್ನ ಬದಲಾವಣೆ ಮಾಡೋದು. ನಂತರ ವಿವಿಧ ಘಟಕಗಳ ಪದಾಧಿಕಾರಿಗಳನ್ನ ಚೇಂಜ್ ಮಾಡೋ ಮಾಸ್ಟರ್ ಪ್ಲಾನ್ ಮಾಡಿದ್ದಾರಂತೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮೇಲೂ ತೂಗುಗತ್ತಿ ನೇತಾಡ್ತಿದೆ. ಇದೇ ಜಾಗಕ್ಕೆ ಲಿಂಗಾಯತ ಸಮುದಾಯದ ಎಂಬಿ ಪಾಟೀಲ್ ಅಥವಾ ಒಕ್ಕಲಿಗ ಸಮುದಾಯದ ಡಿ. ಕೆ ಶಿವಕುಮಾರ್ನ್ನ ತಂದು ಕೂರಿಸೋಕೆ ಸ್ಕೆಚ್ ಹಾಕಿದ್ದಾರಂತೆ.
ಲಿಂಗಾಯತ ನಾಯಕರಲ್ಲಿ ಎಂಬಿ ಪಾಟೀಲ್ ಹೆಸರು ಮುಂಚೂಣಿಯಲ್ಲಿದೆ. ಆದರೆ, ಎಂಬಿಪಿ ಮಾತ್ರ ಇದಕ್ಕೆ ಸುತಾರಾಂ ಒಪ್ತಿಲ್ವಂತೆ. ಬೇಕಿದರೆ ಇರೋ ಸಚಿವ ಸ್ಥಾನವನ್ನೂ ಬಿಡ್ತೀನಿ, ಆದರೆ, ಕೆಪಿಸಿಸಿ ಅಧ್ಯಕ್ಷ ಹುದ್ದೆ ಮಾತ್ರ ಬೇಡ ಅಂತಾ ದೂರ ಹೋಕ್ತಿದ್ದಾರಂತೆ. ಹೀಗಾಗಿ ಹೈಕಮಾಂಡ್ ಕಣ್ಣು ಡಿಕೆಶಿ ಮೇಲೆ ಬಿದ್ದಿದೆ. ಒಂದು ವೇಳೆ ಮಧ್ಯಂತರ ಚುನಾವಣೆ ನಡೆದರು ಅದನ್ನ ಟ್ರಬಲ್ ಶೂಟರ್ ಯಶಸ್ವಿಯಾಗಿ ನಿಬಾಯಿಸ್ತಾರೆ ಅನ್ನೋ ಪ್ಲಾನ್ ಮಾಡ್ಕೊಂಡಿದೆ. ಇದು ಸಿದ್ದುಗೆ ಗೊತ್ತಾಕ್ತಿದ್ದಂತೆ ಸೀದಾ ದೆಹಲಿಗೆ ಹಾರಿದ್ದಾರೆ. ಎಲ್ಲಿ ಡಿಕೆಶಿಗೆ ಸಾರಥ್ಯ ವಹಿಸಿದರೆ ನನ್ನ ಸಿಎಂ ಕನಸಿಗೆ ಪೆಟ್ಟು ಬೀಳುತ್ತೋ ಅಂತ ಕೈ ಘಟಾನುಘಟಿ ನಾಯಕರನ್ನು ಭೇಟಿ ಮಾಡಿದ್ದಾರೆ. ಒಂದು ವೇಳೆ ದಿನೇಶ್ ಬದಲಿಸಿದ್ರೆ, ಪಕ್ಷಕ್ಕೆ ಮತ್ತಷ್ಟು ಹಿನ್ನಡೆಯಾಗಲಿದೆ. ಚುನಾವಣೆ ಬಂದಾಗ ನೋಡಿದ್ರೆ ಆಯ್ತು ಅಂತಾ ಮನವರಿಕೆ ಮಾಡಿದ್ದಾರಂತೆ.
ಇನ್ನು ರಾಜ್ಯದ ಮಟ್ಟಿಗೆ ವಿವಿಧ ಘಟಕಗಳ ಕಾಂಗ್ರೆಸ್ ಪದಾಧಿಕಾರಿಗಳ ಬದಲಾವಣೆ ಬಗ್ಗೆ ಸಿದ್ದು ಹಾಗೂ ಡಿಸಿಎಂ ಪರಮೇಶ್ವರ್ ಹೈಕಮಾಂಡ್ ಜೊತೆ ಚರ್ಚಿಸಿದ್ದಾರೆ. ಚುನಾವಣೆಯಲ್ಲಿ ಕೆಲಸ ಮಾಡದವರನ್ನು ಕೆಳಗಿಳಿಸಿ ಪಕ್ಷಕ್ಕೆ ನಿಷ್ಟೆಯಿರುವ ಹಾಗೂ ಸಂಘಟನೆಯಲ್ಲಿ ಗುರ್ತಿಸಿಕೊಂಡಿರುವ ಮುಖಂಡರಿಗೆ ಸ್ಥಾನ ಮಾನ ನೀಡೋಣ ಅನ್ನೋ ಸಲಹೆ ಮುಂದಿಟ್ಟಿದ್ದಾರಂತೆ. ಹೈಕಮಾಂಡ್ ಕೂಡ ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ಯಂತೆ.
ಸಿದ್ದರಾಮಯ್ಯ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದಿದ್ದಾರೆ. ಶಿಷ್ಯನ ಸ್ಥಾನವನ್ನೂ ಭದ್ರಗೊಳಿಸಿದ್ದಾರೆ, ಜೊತೆಗೆ ತಮ್ಮ ಸಿಎಂ ಆಸೆಯನ್ನೂ ಜೀವಂತವಾಗಿಸಿಕೊಂಡಿದ್ದಾರೆ. ಸದ್ಯಕ್ಕಂತೂ ದಿನೇಶ್ ಗೂಂಡೂರಾವ್ ಬೀಸೋ ದೊಣ್ಣೆಯಿಂದ ಬಚಾವ್ ಆಗಿದ್ದಾರೆ.
Comments are closed.