ಕರ್ನಾಟಕ

ಮದುವೆ ಮುನ್ನಾ ದಿನ ಹೈಡ್ರಾಮಾ ಮಾಡಿದ ವಧು; ಪ್ರಿಯಕರನೊಂದಿಗೆ ಎಸ್ಕೇಪ್‌ ! ಆಡಿದ ನಾಟಕ ಏನು ಗೊತ್ತೇ..?

Pinterest LinkedIn Tumblr

ತುಮಕೂರು: ಈ ಯುವತಿಯ ಮದುವೆ ಇಂದು ನಿಶ್ಚಯವಾಗಿತ್ತು. ಅದಾಗಲೇ ತಯಾರಿಗಳೆಲ್ಲ ನಡೆದಿತ್ತು. ಆದರೆ ಆಕೆ ಮದುವೆ ಮುಂಚಿನ ದಿನ ರಾತ್ರಿ ಪ್ರಿಯಕರನೊಂದಿಗೆ ಓಡಿಹೋಗಿದ್ದಾಳೆ.

ಇಂದು ದೊಡ್ಡಗೊಳ ಗ್ರಾಮದ ವರನೊಂದಿಗೆ ವಿವಾಹ ನಡೆಯಬೇಕಿತ್ತು, ಆದರೆ ಶನಿವಾರ ರಾತ್ರಿ ಮೈಮೇಲೆ ಮಾತ್ರ ವಿಷ ಚೆಲ್ಲಿಕೊಂಡು ತೀವ್ರ ಅಸ್ವಸ್ಥಗೊಂಡವಳಂತೆ ವಧು ನಾಟಕವಾಡಿದ್ದಾಳೆ.ಮದುವೆ ಮನೆಯಲ್ಲಿದ್ದವರೆಲ್ಲರೂ ಏನಾಗುತ್ತಿದೆ ಎಂದು ತಿಳಿಯದೆ ತಕ್ಷಣ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದವಧು ಪೋಷಕರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದಾಳೆ.

ಪರಾರಿಯಾಗಿರುವ ಯುವಕ ಯುವತಿಯ ಅತ್ತೆ ಮಗನೇ ಆಗಿದ್ದಾನೆಎಂದು ತಿಳಿದು ಬಂದಿದೆ. ತಾವರೆಕೆರೆ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.