ಕರ್ನಾಟಕ

ಬಸ್ ನಿಲ್ದಾಣದಲ್ಲೇ ಪ್ರಿಯಕರನಿಗಾಗಿ ಯುವತಿಯರ ಕಿತ್ತಾಟ!

Pinterest LinkedIn Tumblr


ಬೆಂಗಳೂರು: ಪ್ರಿಯಕರನಿಗೆ ಮತ್ತೋರ್ವ ಹುಡುಗಿ ಗುಲಾಬಿ ಕೊಟ್ಟಳೆಂದು ಸಾರ್ವಜನಿಕವಾಗಿ ಬಸ್ ನಿಲ್ದಾಣದಲ್ಲೇ ಶಾಲಾ ಹುಡುಗಿಯರು ಹೊಡೆದಾಡಿಕೊಂಡ ಘಟನೆ ಆನೇಕಲ್ ತಾಲೂಕಿನ ಗಡಿಭಾಗಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರಿನಲ್ಲಿ ನಡೆದಿದೆ.

ಪರಸ್ಪರ ಹೊಡೆದಾಡಿಕೊಂಡ ಹುಡುಗಿಯರು ಸ್ಥಳೀಯ ಹೈಸ್ಕೂಲ್ ಶಾಲೆಯ ವಿದ್ಯಾರ್ಥಿನಿಯರಾಗಿದ್ದು, ಸಮಸ್ತ್ರದಲ್ಲಿ ಇದ್ದಾಗಲೇ ಸಾರ್ವಜನಿಕ ಸ್ಥಳದಲ್ಲಿ ಕಿತ್ತಾಡಿಕೊಂಡಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

ಆಗಿದ್ದೇನು?:
ಪ್ರೇಮಿಗಳ ದಿನವಾದ ಫೆಬ್ರವರಿ 14ಕ್ಕೂ ಮುನ್ನ ಅಂದರೆ ಫೆ. 7ರಂದು ಗುಲಾಬಿ ದಿನ ಆಚರಿಸಲಾಗುತ್ತದೆ. ಈ ಹಿನ್ನೆಲೆ ಇಬ್ಬರು ಹುಡುಗಿಯರು ಇಂದು ಒಬ್ಬ ಹುಡುಗನಿಗೆ ಗುಲಾಬಿ ಹೂ ನೀಡಿದ್ದಾರೆ. ಇದರಿಂದಾಗಿ ಈ ಮೊದಲೇ ಆ ಹುಡುಗನನ್ನು ಪ್ರೀತಿಸುವ ಹುಡುಗಿಯು ಕೋಪಗೊಂಡಿದ್ದಾಳೆ. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ದಾಳಿ ನಡೆದಿದ್ದು, ಬಳಿಕ ಸಾರ್ವಜನಿಕವಾಗಿ ಬಸ್ ನಿಲ್ದಾಣದಲ್ಲೇ ಹೊಡೆದಾಡಿಕೊಂಡಿದ್ದಾರೆ.

ಇಬ್ಬರ ಜಗಳವನ್ನು ಬಿಡಿಸಲು ಹೋದ ಇತರ ವಿದ್ಯಾರ್ಥಿನಿಯರು ಸಹ ಪರಸ್ಪರ ಹೊಡೆದಾಡಿ ಗ್ಯಾಂಗ್ ವಾರ್ ಮಾಡಿಕೊಂಡಿದ್ದಾರೆ. ಬಸ್ ನಿಲ್ದಾಣದಲ್ಲಿದ್ದ ಕೆಲ ಪ್ರಯಾಣಿಕರು ವಿದ್ಯಾರ್ಥಿನಿಯರಿಗೆ ಬುದ್ಧಿವಾದ ಹೇಳಿ ಜಗಳ ಬಿಡಿಸಿ ಕಳುಹಿಸಿದ್ದಾರೆ.

Comments are closed.