ಕರ್ನಾಟಕ

ಅಂಧ ವಿಶ್ವಾಸಕ್ಕೆ ಬಲಿಯಾದ ತಾಯಿ, ಎರಡು ಪುಟ್ಟ ಮಕ್ಕಳು

Pinterest LinkedIn Tumblr

ಚಿಕ್ಕಬಳ್ಳಾಪುರ : ಜ್ಯೋತಿಷಿಯೊಬ್ಬ ಮಕ್ಕಳ ಭವಿಷ್ಯ ಚೆನ್ನಾಗಿಲ್ಲ ಎಂದು ಹೇಳಿದಕ್ಕೆ ನೊಂದ ತಾಯಿಯೊಬ್ಬಳು ಇಬ್ಬರು ಮಕ್ಕಳನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಮುನಿಸಿಪಾಲ್ ಕಾಲೇಜು ಬಳಿ ನಡೆದಿದೆ.

ಮಕ್ಕಳಾದ ಶಮಂತ್ (8) ಹಾಗೂ ಶಾನವಿ (2) ವಿಷವುಣಿಸಿ ಕೊಲೆಗೈದು ಬಳಿಕ ತಾಯಿ ಉಷಾ (30) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜ್ಯೋತಿಷಿಯೊಬ್ಬರು ಮಕ್ಕಳ ಭವಿಷ್ಯ ಚೆನ್ನಾಗಿಲ್ಲ ಎಂದು ಹೇಳಿದ್ದಾರೆ ಎಂದು ನೊಂದು ಉಷಾ ಮಕ್ಕಳನ್ನು ಕೊಂದು ಬಳಿಕ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.