ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅಪರೇಷನ್ ಕಮಲ, ಅಪರೇಷನ್ ಕೈ ಭೀತಿ ಜೋರಾಗಿದೆ. ಇದಕ್ಕೆ ಪೂರಕವಾಗಿ ಉಭಯ ಪಕ್ಷಗಳ ನಾಯಕರು ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿಕೊಂಡಿದ್ದಾರೆ. ಕಾಂಗ್ರೆಸ್ – ಜೆಡಿ (ಎಸ್) ದೋಸ್ತಿ ಸರಕಾರವನ್ನು ಬೀಳಿಸುವ ತಮ್ಮ ತಂತ್ರಗಳಿಗೆ ಪ್ರತಿತಂತ್ರವನ್ನು ಹೆಣೆಯುತ್ತಿರುವ ಮಾಜೀ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮೇಲೆ ಇದೀಗ ಭಾರತೀಯ ಜನತಾ ಪಕ್ಷ ಸಖತ್ ಗರಂ ಆದಂತಿದೆ.
ಸಿದ್ಧರಾಮಯ್ಯನವರನ್ನು ಉದ್ದೇಶಿಸಿ ತಮ್ಮ ಬಿ.ಜೆ.ಪಿ. ಕರ್ನಾಟಕ ಟ್ವಿಟರ್ ಖಾತೆಯಲ್ಲಿ ಸರಣಿ ಪ್ರಶ್ನೆಗಳನ್ನು ಪೋಸ್ಟ್ ಮಾಡಿದೆ. ಇದರಲ್ಲಿ ನಾಲ್ಕು ಮುಖ್ಯ ಪ್ರಶ್ನೆಗಳನ್ನು ಕೇಳಲಾಗಿದೆ.
ಮರ್ಯಾದಾ ಪುರುಷೋತ್ತಮ ಸಿದ್ದರಾಮಯ್ಯ ನವರೇ,
ನೀವು ವಾಸ ಮಾಡುತ್ತಿರುವ ಮನೆ ಕೆ ಜೆ ಜಾರ್ಜ್ ಅವರದು
ಧರಿಸೋ ಗಡಿಯಾರ ಯಾರೋ ಪುಕ್ಕಟ್ಚೆ ಕೊಟ್ಟಿದ್ದು
ಓಡಾಡೋ ಕಾರು ಯಾರೋ ಬಿಟ್ಟಿ ಕೊಟ್ಟಿರೋದು
ವಿಧಾನಸೌಧದ ಕಛೇರಿ ನಿಯಮ ಬಾಹಿರವಾಗಿ ನೀಡಿರುವುದು
ಇಷ್ಟಲ್ಲಾ ಅಕ್ರಮ ಮಾಡಿ ಬಿಜೆಪಿಯವರು ಲಫಂಗರು ಎನ್ನು ವ ತಮಗೇನೆಂದು ಹೇಳಬೇಕು? @siddaramaiah
ಆದರೆ ಬಿ.ಜೆ.ಪಿ.ಯವರ ಎಲ್ಲಾ ಆರೋಪಗಳಿಗೆ ಪ್ರತೀ ಸಲ ಸಮರ್ಥವಾಗಿಯೇ ಉತ್ತರವನ್ನು ನೀಡುತ್ತಿರುವ ಸಿದ್ಧರಾಮಯ್ಯನವರು ಈ ಬಾರಿ ತಮ್ಮ ಮೇಲಿನ ಆರೋಪಗಳಿಗೆ ಯಾವ ರೀತಿಯಲ್ಲಿ ಉತ್ತರಿಸಲಿದ್ದಾರೆ ಎಂಬ ಕುತೂಹಲ ಇದೀಗ ಮೂಡಿದೆ.
Comments are closed.