ಕರ್ನಾಟಕ

250 ಕಿ.ಮೀ ಬೆನ್ನಟ್ಟಿ ಪೊಲೀಸರಿಂದ ಕಂದಮ್ಮನ ರಕ್ಷಣೆ!

Pinterest LinkedIn Tumblr


ಬೆಂಗಳೂರು: ಸಿಲಿಕಾನ್ ಸಿಟಿ ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ ಅಪಹರಣವಾಗಿದ್ದ ಮಗುವನ್ನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನಿಂದ ತಮಿಳುನಾಡಿನವರೆಗೆ ಸಿನಿಮೀಯ ರೀತಿಯಲ್ಲಿ ಬರೋಬ್ಬರಿ 250 ಕೀಲೋ ಮೀಟರ್ ಚೇಸಿಂಗ್ ಮಾಡಿ ಎಳೇ ಕಂದಮ್ಮನನ್ನು ರಕ್ಷಿಸಿದ್ದಾರೆ.

ಬೆಂಗಳೂರಿನ ಮಲ್ಲತ್ತಹಳ್ಳಿ ನಿವಾಸಿಗಳಾದ ಚಂದನ್ ಮತ್ತು ರಾಣಿ ದಂಪತಿಯ ಮಗು ಕಿಡ್ನಾಪ್ ಆಗಿತ್ತು. ಉತ್ತರ ಭಾರತ ಮೂಲದ ಈ ದಂಪತಿ, ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದರು. ದಂಪತಿಗೆ ಪರಿಚಿತನಾಗಿದ್ದ ಕುಮಾರ್ ಎಂಬಾತ ಹಣಕ್ಕಾಗಿ 11 ತಿಂಗಳ ಮುದ್ದಾದ ಮಗುವನ್ನ ಕಿಡ್ನಾಪ್ ಮಾಡಿದ್ದ. ಚಂದನ್ ಮನೆಗೆ ಆಗಾಗ ಬರ್ತಿದ್ದ ಕಂದಮ್ಮನನ್ನ ನೋಡಿದ್ದ. ಜ.16ರಂದು ಮನೆ ಖಾಲಿ ಮಾಡಲು ದಂಪತಿ ಮುಂದಾಗಿದ್ದರು.

ಈ ವೇಳೆ ಸಹಾಯಕ್ಕಾಗಿ ಕುಮಾರ್ ನ್ನ ಕರೆದಿದ್ದರು. ಮನೆ ವಸ್ತುಗಳನ್ನ ಸಾಗಿಸೋ ನೆಪದಲ್ಲಿ ಕುಮಾರ್ ಮಲಗಿದ್ದ ಮಗುವನ್ನು ಎತ್ತೊಯ್ದಿದ್ದ. ಮಗುವಿನೊಂದಿಗೆ ಕಾರಿನಲ್ಲಿ ತಮಿಳುನಾಡಿಗೆ ಪರಾರಿಯಾಗಿದ್ದ ಕುಮಾರ್ ₹2 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ.

ಮಗುವಿನ ಅಪಹರಣ ಸಂಬಂಧ ದೂರು ಸ್ವೀಕರಿಸಿದ ಕೂಡಲೇ ಕಾರ್ಯಪ್ರವೃತ್ತರಾದ ಜ್ಞಾನಭಾರತಿ ಪೊಲೀಸರು, ಆರೋಪಿಯನ್ನ ಬೆನ್ನಟ್ಟಿದ್ದರು. ಬರೋಬ್ಬರಿ 250 ಕೀಲೋ ಮೀಟರ್ ಚೇಸಿಂಗ್ ಮಾಡಿ ಕೊನೆಗೂ ತಮಿಳುನಾಡಿನಲ್ಲಿ ರಕ್ಷಣೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತಮಿಳುನಾಡು ಹೈವೇಯಲ್ಲಿ ನೂರಾರು ಕಿಲೋಮೀಟರ್ ಚೇಸ್ ಮಾಡಿ ಕಿಡ್ನಾಪರ್ ನನ್ನು ಪೊಲೀಸರು ಹಿಡಿದಿದ್ದಾರೆ. ಮಗುವನ್ನ ಸುರಕ್ಷಿತವಾಗಿ ಕರೆತಂದು ಪೋಷಕರಿಗೆ ಒಪ್ಪಿಸಿದ್ದಾರೆ. ಪ್ರಕರಣ ಸಂಬಂಧ ಕುಮಾರ್ ಮತ್ತು ತಂಡವನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.

Comments are closed.