ಕರ್ನಾಟಕ

ಕಾಂಗ್ರೆಸ್‌ನ ಅತೃಪ್ತ ಶಾಸಕರನ್ನು ಭೇಟಿ ಮಾಡಿಸಿ; ಯಡಿಯೂರಪ್ಪ ಹೇಳಿದ್ದೇನು?

Pinterest LinkedIn Tumblr


ಹೊಸದಿಲ್ಲಿ: ಕಾಂಗ್ರೆಸ್‌ನ ಅತೃಪ್ತ ಶಾಸಕರು ದೆಹಲಿಗೆ ಬಂದಿರುವ ಕುರಿತು ನಮಗೆ ಯಾವುದೇ ಸುಳಿವು ಸಿಕ್ಕಿಲ್ಲ, ಎಲ್ಲಿಯೂ ಮಾಹಿತಿ ಹೊರ ಬಿದ್ದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಭಾನುವಾರ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಬಿಎಸ್‌ವೈ ಚುನಾವಣೆ ಹತ್ತಿರ ಬಂತು. ನಾವು ಯಾವ ರೀತಿ ಕೆಲಸ ಮಾಡಬೇಕು ಎನ್ನುವುದನ್ನು ಪ್ರಧಾನಿ ಮೋದಿ ಅವರು ಸೂಚನೆ ನೀಡಿದ್ದಾರೆ.ಶಾಸಕರ ಜೊತೆ ಸಮಾಲೋಚನೆ ನಡೆಸಲು ನಾವು ದೆಹಲಿಗೆ ಬಂದಿದ್ದೇವೆ. ನಮಗೆ ಕಾಂಗ್ರೆಸ್‌ನ ಅತೃಪ್ತಿಯ ಬಗ್ಗೆ ಯಾವ ಕಲ್ಪನೆಯೂ ಇಲ್ಲ ಎಂದರು.

ಕಾಂಗ್ರೆಸ್‌ನಲ್ಲಿ ಅತೃಪ್ತ ಶಾಸಕರಿದ್ದಾರಾ ? ಯಾರು ಅವರು ? ನವದೆಹಲಿಗೆ ಯಾರು ಬಂದಿದ್ದಾರೆ ಎನ್ನುವುದು ಗೊತ್ತಿಲ್ಲ,ನೀವೇ ಅವರ ಬಳಿ ಕರೆದುಕೊಂಡು ಹೋಗಿ ಎಂದರು.

ಸಂಕ್ರಾಂತಿ ನಂತರದ ಶುಭ ಸುದ್ದಿಗೂ ನಮಗೂ ಸಂಬಂಧ ಇಲ್ಲ ಎಂದು ಇದೇ ವೇಳೆ ಬಿಎಸ್‌ವೈ ಹೇಳಿದರು.

ಬಿಜೆಪಿಯ 104 ಶಾಸಕರೊಂದಿಗೆ ಭಾನುವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ಮಹತ್ವದ ಮಾತುಕತೆ ನಡೆಸಿ ಲೋಕಸಭಾ ಚುನಾವಣೆಗೆ ರಣತಂತ್ರ ಹಣೆಯಲಿದ್ದಾರೆ.

Comments are closed.