ಬೆಂಗಳೂರು: ಜನರು ಇಲ್ಲಿ ಸಾಯ್ತಾ ಇದ್ದಾರೆ, ಸಿಎಂ ಕುಮಾರಸ್ವಾಮಿ ಅವರು ಮಾತ್ರ ತಮ್ಮ ಮಗನ ಸಿನಿಮಾ ಶೂಂಟಿಗ್ಗಾಗಿ ಫಾರಿನ್ಗೆ ಹೋಗಿದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಕಿಡಿಕಾರಿದ್ಧಾರೆ.
ಮುಖ್ಯಮಂತ್ರಿಗಳು ಫ್ರಾನ್ಸ್ಗೆ ಹೋಗಿದ್ದಾರೆ ಎನ್ನುವ ಮಾಹಿತಿ ಇದೆ. ಮಗನ ಸಿನಿಮಾ ಶೂಟಿಂಗ್ ನೋಡಲು ಹೋಗಿದ್ದಾರಂತೆ. ಜನ ಇಲ್ಲಿ ಸಾಯ್ತಾ ಇದ್ರೆ, ಇವರು ಮಾತ್ರ ಶೂಟಿಂಗ್ನಲ್ಲಿ ಬ್ಯುಸಿ ಇದ್ದಾರಂತೆ. ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಸಿಎಂ ಹಾಗೂ ಶಾಸಕರು ವಿದೇಶದಲ್ಲಿ ಹೊಸ ವರ್ಷಾಚರಣೆಯ ಮೋಜು ಮಸ್ತಿಗೆ ತೆರಳಿದ್ದಾರೆ ಎಂದು ಎಚ್ಡಿಕೆ ವಿರುದ್ಧ ಗರಂ ಆಗಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಕುಟುಂಬ ಸಹಿತರಾಗಿ ಫ್ರಾನ್ಸ್ಗೆ ಹೊಸವರ್ಷಾಚರಣೆಗೆ ತೆರಳಿರುವ ಮಾಹಿತಿ ಬಂದ ಕೂಡಲೇ ಬಿಎಸ್ವೈ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಜನರು ಸಾಯುತ್ತಿದ್ದಾರೆ. ಆದರೆ ರೈತರ ಹಿತ ಕಾಯಬೇಕಾದವರು, ಅಧಿಕಾರಸ್ಥರು ವಿದೇಶದಲ್ಲಿದ್ದಾರೆ. ಇದರ ಸತ್ಯಾಸತ್ಯತೆಯನ್ನು ಅವರೇ ತಿಳಿಸಬೇಕು ಎಂದು ಎಚ್ಡಿಕೆ ವಿರುದ್ದ ಕಿಡಿಕಾರಿದರು.
ಇನ್ನೂ ರಮೇಶ್ ಜಾರಕಿಹೊಳಿ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರನ್ನು ಭೇಟಿಯಾಗಿದ್ದಾರೆ ಎಂಬುದು ವದಂತಿ. ರಮೇಶ್ ಜಾರಕಿಹೊಳಿ ಮತ್ತು ಅಮಿತ್ ಷಾ ಸಂಪರ್ಕ ಸುಳ್ಳು. ನಮ್ಮೊಂದಿಗೆ ಚರ್ಚಿಸದೆ ಅಮಿತ್ ಷಾ ಭೇಟಿ ಅಸಾಧ್ಯ. ಇದೆಲ್ಲಾ ಕೇವಲ ಊಹಾಪೋಹ. ನಾವು ಲೋಕಸಭಾ ಚುನಾವಣೆಯ ತಯಾರಿಯಲ್ಲಿದ್ದೇವೆ. ಸರ್ಕಾರ ರಚನೆಯತ್ತ ನಮ್ಮ ಗಮನ ಇಲ್ಲ. ರಮೇಶ್ಜಾರಕಿಹೊಳಿ ಸಹೋದರ ನೀಡಿದ ಹೇಳಿಕೆ ನೋಡಿದ್ದೇನೆ. ಆದರೆ ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.
Comments are closed.