ಕರ್ನಾಟಕ

ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ ಸಿಎಂ ವಿದೇಶದಲ್ಲಿ ಹೊಸ ವರ್ಷಾಚರಣೆಯ ಮೋಜು ಮಸ್ತಿಗೆ ತೆರಳಿದ್ದಾರೆ: ಯಡಿಯೂರಪ್ಪ ಕಿಡಿ

Pinterest LinkedIn Tumblr

ಬೆಂಗಳೂರು: ಜನರು ಇಲ್ಲಿ ಸಾಯ್ತಾ ಇದ್ದಾರೆ, ಸಿಎಂ ಕುಮಾರಸ್ವಾಮಿ ಅವರು ಮಾತ್ರ ತಮ್ಮ ಮಗನ ಸಿನಿಮಾ ಶೂಂಟಿಗ್​ಗಾಗಿ ಫಾರಿನ್​​ಗೆ ಹೋಗಿದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​​ ಯಡಿಯೂರಪ್ಪ ಕಿಡಿಕಾರಿದ್ಧಾರೆ.

ಮುಖ್ಯಮಂತ್ರಿಗಳು ಫ್ರಾನ್ಸ್​ಗೆ ಹೋಗಿದ್ದಾರೆ ಎನ್ನುವ ಮಾಹಿತಿ ಇದೆ. ಮಗನ ಸಿನಿಮಾ ಶೂಟಿಂಗ್ ನೋಡಲು ಹೋಗಿದ್ದಾರಂತೆ. ಜನ ಇಲ್ಲಿ ಸಾಯ್ತಾ ಇದ್ರೆ, ಇವರು ಮಾತ್ರ ಶೂಟಿಂಗ್​​ನಲ್ಲಿ ಬ್ಯುಸಿ ಇದ್ದಾರಂತೆ. ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಸಿಎಂ ಹಾಗೂ ಶಾಸಕರು ವಿದೇಶದಲ್ಲಿ ಹೊಸ ವರ್ಷಾಚರಣೆಯ ಮೋಜು ಮಸ್ತಿಗೆ ತೆರಳಿದ್ದಾರೆ ಎಂದು ಎಚ್​ಡಿಕೆ ವಿರುದ್ಧ ಗರಂ ಆಗಿದ್ದಾರೆ.

ಎಚ್.ಡಿ.ಕುಮಾರಸ್ವಾಮಿ ಕುಟುಂಬ ಸಹಿತರಾಗಿ ಫ್ರಾನ್ಸ್​ಗೆ ಹೊಸವರ್ಷಾಚರಣೆಗೆ ತೆರಳಿರುವ ಮಾಹಿತಿ ಬಂದ ಕೂಡಲೇ ಬಿಎಸ್​ವೈ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಜನರು ಸಾಯುತ್ತಿದ್ದಾರೆ. ಆದರೆ ರೈತರ ಹಿತ ಕಾಯಬೇಕಾದವರು, ಅಧಿಕಾರಸ್ಥರು ವಿದೇಶದಲ್ಲಿದ್ದಾರೆ. ಇದರ ಸತ್ಯಾಸತ್ಯತೆಯನ್ನು ಅವರೇ ತಿಳಿಸಬೇಕು ಎಂದು ಎಚ್​ಡಿಕೆ ವಿರುದ್ದ ಕಿಡಿಕಾರಿದರು.

ಇನ್ನೂ ರಮೇಶ್​ ಜಾರಕಿಹೊಳಿ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಷಾ ಅವರನ್ನು ಭೇಟಿಯಾಗಿದ್ದಾರೆ ಎಂಬುದು ವದಂತಿ. ರಮೇಶ್ ಜಾರಕಿಹೊಳಿ ಮತ್ತು ಅಮಿತ್ ಷಾ ಸಂಪರ್ಕ ಸುಳ್ಳು. ನಮ್ಮೊಂದಿಗೆ ಚರ್ಚಿಸದೆ ಅಮಿತ್ ಷಾ ಭೇಟಿ ಅಸಾಧ್ಯ. ಇದೆಲ್ಲಾ ಕೇವಲ ಊಹಾಪೋಹ. ನಾವು ಲೋಕಸಭಾ ಚುನಾವಣೆಯ ತಯಾರಿಯಲ್ಲಿದ್ದೇವೆ. ಸರ್ಕಾರ ರಚನೆಯತ್ತ ನಮ್ಮ ಗಮನ ಇಲ್ಲ. ರಮೇಶ್​ಜಾರಕಿಹೊಳಿ ಸಹೋದರ ನೀಡಿದ ಹೇಳಿಕೆ ನೋಡಿದ್ದೇನೆ. ಆದರೆ ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.

Comments are closed.