ಕರ್ನಾಟಕ

ನಾಡಗೀತೆ ಸಂದರ್ಭ ಸಚಿವರಿಂದ ಮೊಬೈಲ್ ವೀಕ್ಷಣೆ

Pinterest LinkedIn Tumblr


ತುಮಕೂರು: ಗ್ರಾಮೀಣಾಭಿವೃದ್ಧಿ ಸಚಿವರು ನಾಡಗೀತೆಗೆ ಅಗೌರವ ತೋರಿದ ಘಟನೆ ತುಮಕೂರಿನ ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆದಿದೆ.

ಸಭೆಯ ಆರಂಭದ ಮುನ್ನ ಸಂಪ್ರದಾಯದಂತೆ ನಾಡಗೀತೆ ಹಾಡಲಾಯಿತು. ಆದರೆ ಈ ವೇಳೆ ಗ್ರಾಮೀಣಾಭಿವೃದ್ಧಿ ಸಚಿವರಾದ ಕೃಷ್ಣಬೈರೇಗೌಡರು ಮೊಬೈಲ್ ನೋಡುವುದರಲ್ಲಿ ತಲ್ಲೀನರಾಗಿದ್ದರು. ನಾಡಗೀತೆ ಆರಂಭದಿಂದ ಕೊನೆಯವರೆಗೂ ಮೊಬೈಲ್ ವೀಕ್ಷಣೆಯಲ್ಲಿ ಸಚಿವರು ಬ್ಯುಸಿಯಾಗಿದ್ದರು.

ಸಚಿವರ ಈ ವರ್ತನೆ ಕೆಲವರ ಆಕ್ರೋಶಕ್ಕೆ ಕಾರಣವಾಗಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ನಾಡಗೀತೆಗೆ ಗೌರವ ನೀಡದೆ ಇದ್ದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಸದ್ಯ ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

Comments are closed.