ಕರ್ನಾಟಕ

2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

Pinterest LinkedIn Tumblr


ಬೆಂಗಳೂರು: 2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬುಧವಾರ ಬಿಡುಗಡೆಯಾಗಿದ್ದು, ಸುಪ್ರೀಂ ಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಮೂರ್ತಿ‌ ಹೆಚ್.ಎಲ್ ದತ್ತು,ನಟ ಜೈಜಗದೀಶ್,ಮಾರ್ಗರೇಟ್ ಆಳ್ವ ಸೇರಿದಂತೆ 63 ಗಣ್ಯರು ಆಯ್ಕೆಯಾಗಿದ್ದಾರೆ.
ಮೂರು ಬಾರಿ ಮುಂದೂಡಿಕೆಯಾಗಿದ್ದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನಾಳೆ‌ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುತ್ತಿದ್ದು, ಪ್ರಶಸ್ತಿ ಪ್ರದಾನಕ್ಕೆ ಮುನ್ನಾದಿನವಾದ ಇಂದು ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದೆ. 63 ನೇ ಕನ್ನಡ ರಾಜ್ಯೋತ್ಸವ ಆಗಿರುವ ಕಾರಣ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಕನ್ನಡ ನಾಡಿಗೆ ಕೊಡಿಗೆ ನೀಡಿರುವ 63 ಗಣ್ಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪುರಸ್ಕೃತರ ಹೆಸರು:
ಸಾಹಿತ್ಯ

ಹಸನ್ ನಯೀಂ ಸುರಕೋಡ್
ಚ.ಸರ್ವಮಂಗಳ
ಚಂದ್ರಶೇಖರ ತಾಳ್ಯ

ರಂಗಭೂಮಿ
ಎಸ್.ಎನ್.ರಂಗಸ್ವಾಮಿ
ಪುಟ್ಟಸ್ವಾಮಿ
ಪಂಪಣ್ಣ ಕೋಗಳಿ

ಸಂಗೀತ
ಅಣ್ಣು ದೇವಾಡಿಗ

ನೃತ್ಯ
ಎಂ.ಆರ್.ಕೃಷ್ಣಮೂರ್ತಿ

ಜಾನಪದ
ಗುರುವ ಕೊರಗ
ಗಂಗಹುಚ್ಚಮ್ಮ
ಚನ್ನಮಲ್ಲೇಗೌಡ
ಶರಣಪ್ಪ ಬೂತೇರ
ಶಂಕ್ರಮ್ಮ ಮಹಾದೇವಪ್ಪಾ
ಬಸವರಾಜ ಅಲಗೂಡ
ಚೂಡಾಮಣಿ ರಾಮಚಂದ್ರ

ಶಿಲ್ಪಕಲೆ
ಯಮನಪ್ಪ ಚಿತ್ರಗಾರ
ಬಸಣ್ಣ ಕಾಳಪ್ಪ ಕಂಚಗಾರ

ಚಿತ್ರಕಲೆ
ಬಸವರಾಜ ರೇವಣಸಿದ್ದಪ್ಪ ಉಪ್ಪಿನ

ಕ್ರೀಡೆ
ಕೆನೆತ್ ಪೊವೆಲ್
ವಿ.ಎಸ್.ವಿನಯ
ಆರ್.ಚೇತನ

ಯಕ್ಷಗಾನ
ಹಿರಿಯಡ್ಕ ಗೋಪಾಲ ರಾವ್
ಸೀತಾರಾಮ ಕಟೀಲು

ಬಯಲಾಟ
ಯಲ್ಲವ್ವಾ ರೊಡ್ಡಪ್ಪನವರ
ಭೀಮರಾಯ ಬೋರಗಿ

ಚಲನಚಿತ್ರ
ಭಾರ್ಗವ
ಜೈಜಗದೀಶ್
ರಾಜನ್
ದತ್ತುರಾಜ್

ಶಿಕ್ಷಣ
ಗೀತಾ ರಾಮಾನುಜಂ
ಎ.ವಿ.ಎಸ್.ಮೂರ್ತಿ
ಡಾ.ಕೆ.ಪಿ.ಗೋಪಾಲಕೃಷ್ಣ
ಶಿವಾನಂದ ಕೌಜಲಗಿ

ಎಂಜಿನಿಯರಿಂಗ್
ಪ್ರೊ.ಸಿ.ಇ.ಜಿ.ಜಸ್ಟೋ

ಸಂಕೀರ್ಣ
ಆರ್.ಎಸ್.ರಾಜಾರಾಂ
ಮೇಜರ್ ಪ್ರದೀಪ್ ಆರ್ಯ
ಸಿ.ಕೆ.ಜೋರಾಪುರ
ನರಸಿಂಹಯ್ಯ
ಡಿ.ಸುರೇಂದ್ರಕುಮಾರ್
ಪಿ.ಬಿ.ಶಾಂತಪ್ಪನವರ್
ನಮಶಿವಾಯಂ ರೇಗುರಾಜ್
ಪಿ.ರಾಮದಾಸ್
ಎಂ.ಜೆ.ಬ್ರಹ್ಮಯ್ಯ

ಪತ್ರಿಕೋದ್ಯಮ
ಜಿ.ಎನ್.ರಂಗನಾಥರಾವ್
ಬಸವರಾಜಸ್ವಾಮಿ
ಅಮ್ಮೆಂಬಳ ಆನಂದ

ಸಹಕಾರ
ಸಿ.ರಾಮು

ಸಮಾಜಸೇವೆ
ಆನಂದ.ಸಿ.ಕುಂದರ್
ರಾಚಪ್ಪ ಹಡಪದ
ಕೃಷ್ಣಕುಮಾರ ಪೂಂಜ
ಮಾರ್ಗರೇಟ್ ಆಳ್ವ

ಕೃಷಿ
ಅಣ್ಣಾರಾವ ವಣದೆ
ಮೂಕಪ್ಪ ಪೂಜಾರ್

ಪರಿಸರ
ಕಲ್ಮನೆ ಕಾಮೇಗೌಡ

ಸಂಘ-ಸಂಸ್ಥೆ
ರಂಗದೊರೆ ಸ್ಮಾರಕ ಆಸ್ಪತ್ರೆ

ವೈದ್ಯಕೀಯ
ಡಾ.ಜೆ.ವಿ.ನಾಡಗೌಡ
ಡಾ.ಸೀತಾರಾಮ ಭಟ್
ಪಿ.ಮೋಹನರಾವ್
ಡಾ.ಎಂ.ಜಿ.ಗೋಪಾಲ್

ನ್ಯಾಯಾಂಗ
ಎಚ್.ಎಲ್.ದತ್ತು

ಹೊರನಾಡು
ಡಾ.ಎ.ಎ.ಶೆಟ್ಟಿ

ಸ್ವಾತಂತ್ರ್ಯ ಹೋರಾಟಗಾರರು
ಬಸವರಾಜ ಬಿಸರಳ್ಳಿ

Comments are closed.