ಕರ್ನಾಟಕ

ಅಂಬಿ ಪಾರ್ಥಿವ ಶರೀರದೆದುರೇ ಕುಸಿದು ಬಿದ್ದ ಸುಮಲತಾ

Pinterest LinkedIn Tumblr


ಬೆಂಗಳೂರು: ಪತಿ ಅಂಬರೀಶ್ ನಿಧನದಿಂದ ಆಘಾತಕ್ಕೀಡಾಗಿರುವ ಪತ್ನಿ ಸುಮಲತಾ ಅವರು ಪತಿ ಪಾರ್ಥಿವ ಶರೀದರೆದುರು ಕುಸಿದ ಬಿದ್ದ ಪ್ರಸಂಗ ಜರುಗಿತು.

ಶನಿವಾರ ರಾತ್ರಿ ಅಂಬರೀಶ್ ನಿಧನ ಹೊಂದಿದ ಬಳಿಕ ತೀವ್ರ ಆಘಾತಕ್ಕೊಳಗಾಗಿದ್ದ ಸುಮಲತಾ ಅವರು, ಸೋಮವಾರ ಪತಿಯ ಪಾರ್ಥಿವ ಶರೀರ ಕಂಠೀರವ ಸ್ಟೇಡಿಯಂ ತಲುಪುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ.

ಈ ವೇಳೆ ಸ್ಥಳದಲ್ಲೇ ಇದ್ದ ಸಚಿವ ಡಿ.ಕೆ.ಶಿವಕುಮಾರ್ ಕೂಡಲೇ ಸರಕಾರಿ ವೈದ್ಯರು ಅಥವಾ ಕುಟುಂಬ ವೈದ್ಯರು ಸ್ಥಳಕ್ಕೆ ಬನ್ನಿ ಎಂದು ಮೈಕ್‌ನಲ್ಲಿ ಮನವಿ ಮಾಡಿದರು. ತಪಾಸಣೆ ಮಾಡಿದ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದರು. ಸುಮಲತಾ ಅವರಿಗೆ ಕುಡಿಯಲು ನೀರು ನೀಡಿದ ಬಳಿಕ ಕೆಲವೇ ನಿಮಿಷಗಳಲ್ಲಿ ಚೇತರಿಸಿಕೊಂಡರು. ಸುಮಲತಾ ಜತೆಗಿದ್ದ ಕುಟುಂಬದ ಇನ್ನೋರ್ವ ಓರ್ವ ಮಹಿಳೆ ಕೂಡಾ ಸುಸ್ತಾಗಿ ಬಿದ್ದರು.

ಭಾನುವಾರ ಅಂಬರೀಶ್ ಪಾರ್ಥಿವ ಶರೀರವನ್ನು ಮಂಡ್ಯಗೆ ತೆಗೆದುಕೊಂಡ ಹೋಗಲಾಗಿತ್ತು. ಭಾನುವಾರ ಸಂಜೆಯಿಂದಲೇ ಇಂದು ಮುಂಜಾನೆವರೆಗೂ ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಬಳಿಕ ಇಂದು ಮುಂಜಾನೆ ಬೆಂಗಳೂರಿಗೆ ಕರೆತಂದು ಮೆರವಣಿಗೆ ಮೂಲಕ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರಕ್ಕೆ ನೆರವೇರಿಸಲಾಯಿತು. ಈ ಎಲ್ಲ ಸಮಯದಲ್ಲಿ ಪತಿ ಪಾರ್ಥಿವ ಶರೀರದ ಜತೆಯೇ ಇದ್ದ ಸುಮಲತಾ ಅವರು, ಅತೀವ ದುಃಖದಿಂದ ಬಳಲಿದ್ದರು.

Comments are closed.