ಹಾಸನ: ಸಿಎಂ ತವರು ಜಿಲ್ಲೆಯಲ್ಲಿಯೇ ಆಪರೇಷನ್ ಕಮಲ ನಡೆದಿದ್ದು, ಕಿಂಗ್ ಪಿನ್ಗಳ ಅಸಲಿ ಆಟ ಇದೀಗ ಬಟಾಬಯಲಾಗಿದೆ.
ಸಿಎಂ ಕುಮಾರಸ್ವಾಮಿ ಈ ಹಿಂದೆ ಮಾಡಿದ್ದ ಆರೋಪ ನಿಜವಾಗಿದೆ. ಬಿಜೆಪಿಯವರು 3 ಜನ ಕಿಂಗ್ಪಿನ್ಗಳನ್ನು ಇಟ್ಟುಕೊಂಡು ಗೌಡರ ಕೋಟೆಯಲ್ಲಿ ಆಪರೇಷನ್ ಕಮಲದ ತಾಲೀಮು ನಡೆಸಿದ್ದಾರೆ ಎಂದು ಎಚ್ಡಿಕೆ ಆರೋಪ ಮಾಡಿದ್ದರು. ಹಾಸನ ಜಿಲ್ಲೆ ಸಕಲೇಶಪುರ ಕ್ಷೇತ್ರದ ಜೆಡಿಎಸ್ ಶಾಸಕ ಹೆಚ್.ಕೆ.ಕುಮಾರಸ್ವಾಮಿಗೆ ಗಾಳ ಹಾಕಲು ಕಿಂಗ್ಪಿನ್ ಉದಯ್ ಗೌಡ ಯತ್ನಿಸಿದ್ದ ಎಂಬ ಸತ್ಯ ಬಯಲಾಗಿದೆ.
ಕಿಂಗ್ಪಿನ್ ಉದಯ್ ಗೌಡ ಜಿಮ್ ಸೋಮನ ಬ್ಯುಸಿನೆಸ್ ಪಾರ್ಟ್ನರ್. ಈತ ಜೆಡಿಎಸ್ ಶಾಸಕ ಎಚ್.ಕೆ.ಕುಮಾರಸ್ವಾಮಿಗೆ ಆಮಿಷ ಒಡ್ಡಿದ್ದ. ಜೆಡಿಎಸ್ ನಿಂದ ಬಿಜೆಪಿಗೆ ಬಂದರೆ 30 ಕೋಟಿ ಹಣ ಮತ್ತು ಸಚಿವ ಸ್ಥಾನ ನೀಡುವುದಾಗಿ ಉದಯ್ ಮತ್ತು ಸಹಚರರು ಹೇಳಿದ್ದರು.
ಇನ್ನೂ ಈ ವಿಷಯಕ್ಕೆ ಸಂಬಂಧಿಸಿದಂತೆ, ಯಾವುದೇ ಕಾರಣಕ್ಕೂ ನಾವು ಜೆಡಿಎಸ್ ಬಿಡುವ ಮಾತೇ ಇಲ್ಲಾ ಎಂದು ಶಾಸಕರ ಪತ್ನಿ ಚಂಚಲಾ ಕುಮಾರಸ್ವಾಮಿ ಹೇಳಿದ್ದಾರೆ. ಹೆಚ್.ಕೆ.ಕುಮಾರಸ್ವಾಮಿ ಜೆಡಿಎಸ್ ನಿಂದ ಒಟ್ಟಾರೆ 6 ಬಾರಿ ಎಂಎಲ್ಎ ಮತ್ತು ಮಾಜಿ ಸಚಿವರು ಆಗಿದ್ದರು.
ಈ ಕಿಂಗ್ಪಿನ್ಗಳು ನಿನ್ನೆಯಷ್ಟೇ ಅರಸೀಕೆರೆಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು ಎನ್ನಲಾಗಿದೆ. ಕಾರ್ಯಕ್ರಮದ ನಂತರ ಯಡಿಯೂರಪ್ಪ ಶಿವಮೊಗ್ಗಕ್ಕೆ ತೆರಳಿದ್ದರು. ಕಿಂಗ್ಪಿನ್ಗಳು ಒಟ್ಟಿಗೆ ಸೇರಿ ಸರ್ಕಾರ ಉರುಳಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟಾರೆ ಜೆಡಿಎಸ್ ಭದ್ರಕೋಟೆಯಲ್ಲೇ ಬಿಜೆಪಿ ಆಪರೇಷನ್ ಕಮಲ ನಡೆಸಲು ಮುಂದಾಗಿದೆ. ಯಡಿಯೂರಪ್ಪನವರ ಕೃಪಾಶೀರ್ವಾದದಲ್ಲಿ ಆಪರೇಷನ್ ಕಮಲ ನಡೆದಿತ್ತಾ..? ಎಂಬ ಪ್ರಶ್ನೆಯೂ ಸಹ ಹುಟ್ಟಿದೆ.
Comments are closed.