ಕರ್ನಾಟಕ

ಕೊಡಗು-ಚಿಕ್ಕಮಗಳೂರು-ಹಾಸನದಲ್ಲಿ ನಿಲ್ಲದ ವರುಣನ ಆರ್ಭಟ: ಪರದಾಡುತ್ತಿರುವ ಜನ; ಚುರುಕುಗೊಂಡ ರಕ್ಷಣಾ ಕಾರ್ಯ

Pinterest LinkedIn Tumblr

ಬೆಂಗಳೂರು: ಕೊಡಗು, ಹಾಸನ, ಚಿಕ್ಕಮಗಳೂರು, ಮಂಡ್ಯಗಳಲ್ಲಿ ಮಳೆಯ ಅವಾಂತರ ಮುಂದುವರಿದಿದೆ. ಸಂಚಾರ ಬಂದ್‌ ಆಗಿದ್ದು ಜನ ಪರದಾಡುವಂತಾಗಿದೆ. ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಕೂಡ ಭಾರಿ ಮಳೆಯಾಗಿದ್ದು, ಶನಿವಾರ ಕೊಂಚ ಇಳಿಕೆಯಾಗಿದೆ. ರಾತ್ರಿ ಸುರಿದ ಮಳೆಯಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ರಕ್ಷಣಾ ಕಾರ್ಯಾಚರಣೆ ಕೂಡ ಮುಂದುವರಿದಿದೆ.

ರಾತ್ರಿ ಮಡಿಕೇರಿ ಸೇರಿದಂತೆ ಜಿಲ್ಲೆಯಲ್ಲಿ ಸುರಿದ ಮಳೆಗೆ ಪರಿಸ್ಥಿತಿ ತೀವ್ರ ಹದಗೆಟ್ಟು ಹೋಗಿದೆ. ಕಂಟ್ರೋಲ್‌ ರೂಂ ಸಿಬ್ಬಂದಿ ಸಂಕಷ್ಟಕ್ಕೆ ಒಳಗಾಗಿರುವ ವರಿಂದ ಕರೆಗಳನ್ನು ಸ್ವೀಕರಿಸುತ್ತಲೇ ಇದ್ದಾರೆ. ಕೊಡಗಿನಲ್ಲಿ ಸೇನೆಯಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಸಂಪರ್ಕ ರಸ್ತೆಗಳಿಲ್ಲದ ಕಾರಣ ಸ್ಥಳಕ್ಕೆ ಪರಿಹಾರ ಕಾರ್ಯಕರ್ತರು ಸ್ಥಳಕ್ಕೆ ತೆರಳಲು ಅಡ್ಡಿಯಾಗಿದೆ. ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ನಡೆಯುವ ಸಾಧ್ಯತೆ ಇದೆ. ಪುನರ್ವಸತಿ ಕೇಂದ್ರಗಳು ಭರ್ತಿಯಾಗಿವೆ.

ಮೈಸೂರಿನಿಂದ ಒಂಬತ್ತು ವೈದ್ಯರ ತಂಡಗಳು ಮತ್ತು ಹೊದಿಕೆ, ನೀರಿನ ಬಾಟಲಿ, ಡ್ರೈಫ್ರೂಟ್ಸ್‌ ಮತ್ತಿತರ ಆಹಾರ ಹಾಗೂ ಅಗತ್ಯ ಸಾಮಗ್ರಿಗಳು ಕೊಡಗಿಗೆ ತಲುಪಿವೆ.

ಮಳೆಯ ರಭಸಕ್ಕೆ ಹಾಸನದ ಎಡಕುಮೇರಿಯಲ್ಲಿ ರೈಲ್ವೆ ಸೇತುವೆಗಳು ಕೊಚ್ಚಿ ಹೋಗಿವೆ. ಬೆಂಗಳೂರು ಮಂಗಳೂರು ರೈಲು ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ 50 ಕಡೆ ಗುಡ್ಡ ಕುಸಿದಿದೆ. ಬಂಡೆಯೊಂದು ಕುಸಿದು ಹಳಿಗೆ ಬಿದ್ದಿದೆ.

ಮಲೆನಾಡಿನಲ್ಲಿ ಭಾರಿ ಗಾಳಿಯಿಂದಾಗಿ ತಡೆಗೋಡೆ ಸಮೇತ ಧರೆ ಕುಸಿದಿದೆ. ಕೊಪ್ಪ ತಾಲೂಕಿನ ಹೇರೂರು ಗ್ರಾಮದಲ್ಲಿ ಧರೆ ಕುಸಿದು ಗ್ರಾಮಸ್ಥರು ಭಯದಲ್ಲೇ ಸಂಚರಿಸುವಂತಾಗಿದೆ. ಕೊಪ್ಪ ತಾಲೂಕಿನ ಶಾನುವಳ್ಳಿಯಲ್ಲಿ ಬಾವಿಯೊಂದು ಮೂವತ್ತು ಅಡಿ ಕುಸಿದು ಸುರಂಗವಾಗಿ ಮಾರ್ಪಟ್ಟಿದೆ. ಕೊಪ್ಪ ತಾಲೂಕಿನ ಶಾನುವಳ್ಳಿಯಲ್ಲಿ ಬಾವಿಯೊಂದು ಮೂವತ್ತು ಅಡಿ ಕುಸಿದಿದೆ.

ಶ್ರೀರಂಗಪಟ್ಟಣ ವಿದ್ಯುತ್‌ ವಿತರಣಾ ಕೇಂದ್ರ ಮುಳುಗಡೆ

ಕಾವೇರಿ ನದಿ ಪ್ರವಾಹ ತಗ್ಗದ ಕಾರಣ ಶ್ರೀರಂಗಪಟ್ಟಣದ ವಿದ್ಯುತ್ ವಿತರಣಾ ಕೇಂದ್ರ ಮುಳುಗಡೆಯಾಗಿದೆ. ಕೆಆರ್ಎಸ್ ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಡುಗಡೆಯಾಗುತ್ತಿದ್ದು, ಜಲಾಶಯ ಕೆಳಭಾಗದಲ್ಲಿ ಪ್ರವಾಹ ಸ್ಥಿತಿ ಮುಂದುವರಿದಿದೆ.ಭಾರಿ ನೀರಿನಿಂದ ಶ್ರೀರಂಗಪಟ್ಟಣ-ಮೇಳಾಪುರದ ವಿದ್ಯುತ್ ವಿತರಣಾ ಕೇಂದ್ರ ಜಲಾವೃತಗೊಂಡಿದೆ. ಹೀಗಾಗಿ ಸುತ್ತಮುತ್ತಲ ಗ್ರಾಮದಲ್ಲಿ ವಿದ್ಯುತ್ ಇಲ್ಲದೆ ಜನ ಪರದಾಡುವಂತಾಗಿದೆ. ಮೈಸೂರಿನ ಕುಡಿಯುವ ನೀರು ಪೂರೈಕೆ ಘಟಕಕ್ಕೂ ವಿದ್ಯುತ್ ಮೈಸೂರಿಗೆ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತಯವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಶ್ರೀರಂಗಪಟ್ಟಣ ವೆಲ್ಲೆಸ್ಲಿ ಸೇತುವೆಗೆ ಅಪಾಯಕಾರಿಯಾಗುವ ಮಟ್ಟದಲ್ಲಿ ಕಾವೇರಿ ನದಿಯಲ್ಲಿ ನೀರು ಹರಿಯುತ್ತಿದೆ. ನದಿಯಂಚಿನ ಪ್ರದೇಶದ ಮನೆಯು ಜಲಾವೃತಗೊಂಡಿದ್ದು, ಹೊಸ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲೂ ಮಂಡಿಯುದ್ದ ನೀರು ನಿಂತಿದೆ.

Comments are closed.