ಕರ್ನಾಟಕ

ನನಗೆ ಟಿಕೆಟ್‌ ಸಿಗುವುದೇ ಅನುಮಾನ: ಅಂಬರೀಶ್‌

Pinterest LinkedIn Tumblr


ಮಂಡ್ಯ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ನನಗೆ ಟಿಕೆಟ್‌ ಸಿಗುವುದೇ ಅನುಮಾನ ಎಂದು ಶಾಸಕ ಅಂಬರೀಶ್‌ ತಮ್ಮ ಸ್ಪರ್ಧೆಯ ಬಗ್ಗೆ ಶಂಕೆ ವ್ಯಕ್ತಪಡಿಸಿದರು.

ನನಗೆ ಇನ್ನೂ ಟಿಕೆಟ್‌ ಅಂತಿಮವಾಗಿಲ್ಲ. ಹೀಗಾಗಿ ಪ್ರಚಾರ ಆರಂಭಿಸಿಲ್ಲ. ನನಗೆ ಟಿಕೆಟ್‌ ಕೊಡದಿದ್ದರೆ ಸಂತೋಷ. ಅದಕ್ಕೆಲ್ಲ ನಾನು ಬೇಸರ ಮಾಡಿಕೊಳ್ಳುವುದಿಲ್ಲ. ಟಿಕೆಟ್‌ ಕೊಟ್ಟರೆ ಸ್ಪರ್ಧಿಸುತ್ತೇನೆ. ಇಲ್ಲವಾದರೆ ಪಕ್ಷದ ಅಭ್ಯರ್ಥಿಯ ಗೆಲುವಿಗೆ ದುಡಿಯುವೆ ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು. ನನಗೆ ಟಿಕೆಟ್‌ ನೀಡಬೇಕೋ, ಬೇಡವೋ ಎನ್ನು ವುದನ್ನು ಹೈಕಮಾಂಡ್‌ ತೀರ್ಮಾನಿಸುತ್ತದೆ.

ಸಿದ್ದರಾಮಯ್ಯ, ಪರಮೇಶ್ವರ್‌ ಕೈಯ್ಯಲ್ಲಿ ನನ್ನ ಟಿಕೆಟ್‌ ಇಲ್ಲ. ಹೈಕಮಾಂಡ್‌ ಈ ಬಾರಿ ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದರೆ ಕ್ಷೇತ್ರ ಬಿಟ್ಟುಕೊಡಲು ಸಿದ್ಧ ಎಂದು ಹೇಳಿದರು. ಚುನಾವಣೆಯಲ್ಲಿ ನಾನೇ ಸ್ಪರ್ಧಿಸಬೇಕು, ನನ್ನ ಮಗನನ್ನು ಕರೆತರಬೇಕು. ರಾಜಕೀಯದಲ್ಲಿ ನಾನೊಬ್ಬನೇ ಇರಬೇಕೆಂಬ ಆಸೆ ನನಗಿಲ್ಲ.

ಕಾಂಗ್ರೆಸ್‌ನಲ್ಲಿ ಸೋನಿಯಾ, ರಾಹುಲ್‌, ಜೆಡಿಎಸ್‌ನಲ್ಲಿ ಎಚ್‌.ಡಿ. ದೇವೇಗೌಡ, ಕುಮಾರಸ್ವಾಮಿ ಬಿಟ್ಟರೆ ಇನ್ಯಾರಿಗೂ ಕುಟುಂಬ ರಾಜಕಾರಣ ಒಗ್ಗುವುದಿಲ್ಲ. ನನಗೆ ಜೆಡಿಎಸ್‌ ಮಾತ್ರವಲ್ಲ. ಎಲ್ಲಾ ಪಕ್ಷಗಳಿಂದಲೂ ಆಹ್ವಾನವಿದೆ. ಮಂಡ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ನನ್ನಂತಹ ಲೀಡರ್‌ ಸಿಗ್ತಾನಾ ಎಂದು ಪ್ರಶ್ನಿಸಿದರು.

-ಉದಯವಾಣಿ

Comments are closed.