ಬೆಂಗಳೂರು: ಕರ್ತವ್ಯ ನಿಷ್ಠೆ ತೋರಿದ ಸೆಕ್ಯುರಿಟಿ ಗಾರ್ಡ್ ಮೇಲಿನ ಹಲ್ಲೆ ಪ್ರಕರಣ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕೆ ಉತ್ತರಪ್ರದೇಶದ ವ್ಯಕ್ತಿಯೊಬ್ಬ ಕನ್ನಡಿಗನ ಮೇಲೆ ಹಲ್ಲೆ ನಡೆಸಿರುವ ವಿಷಯ ತಡವಾಗಿ ಹೊರಬಂದಿದೆ.
ಹಲ್ಲೆಗೊಳಗಾದ ಇಮ್ರಾನ್ ಖಾನ್ ಫೆ. 25(ಭಾನುವಾರ)ರಂದು ಲಾಲ್ಬಾಗ್ನಲ್ಲಿ ನಡೆದ ಘಟನೆಯ ಕುರಿತು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, ಕನ್ನಡಿಗನ ಮೇಲೆ ಹಲ್ಲೆ ನಡೆಯುತ್ತಿದ್ದರೂ ಸಾರ್ವಜನಿಕರು ಸಹಾಯಕ್ಕೆ ಬಾರದಿರುವ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.
ಏನಿದು ಪ್ರಕರಣ?
ನೀರಿನ ಬಳಿ ಆಡಲು ಹೋಗುತ್ತಿದ್ದ ಉತ್ತರಪ್ರದೇಶ ಮೂಲದ ಮಗುವನ್ನು ತಡೆದ ಕಾರಣ, ಸೆಕ್ಯುರಿಟಿಯ ಮೇಲೆ ಮಗುವಿನ ಕುಟುಂಬದವರು ಹಲ್ಲೆ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಪೊಲೀಸರು, ಪ್ರಕರಣದ ಕುರಿತು ವಿಚಾರಿಸಲು ಆರಂಭಿಸಿದರು. ಸಾರ್ವಜನಿಕರಲ್ಲಿ ಯಾರು ಮುಂದೆ ಬಂದು ಈ ವಿಷಯ ಹೇಳದಿದ್ದಾ, ನಾನು ಪೊಲೀಸರಿಗೆ ಪ್ರಕರಣದ ಕುರಿತು ಮಾಹಿತಿ ನೀಡಿದೆ. ಆದರೆ ಅದೇ ಕುಟುಂಬದ ವ್ಯಕ್ತಿಯೊಬ್ಬ ಪೊಲೀಸರು ಸ್ಥಳದಿಂದ ಹೋದ ತಕ್ಷಣ ನನ್ನ ಮೇಲೆ ಏಕಾಏಕಿ ಎರಗಿ ಮಾರಣಾಂತಿಕ ಹಲ್ಲೆ ನಡೆಸಿದರು ಎಂದು ಘಟನೆ ಕುರಿತು ಫೇಸ್ಬುಕ್ನಲ್ಲಿ ವಿವರಿಸಿದ್ದಾರೆ.
ಘಟನೆ ತಾರಕಕ್ಕೇರುತ್ತಿದ್ದಂತೆ ಉತ್ತರಪ್ರದೇಶ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
Comments are closed.