ಕೊಪ್ಪಳ: ತನ್ನ ನೆಚ್ಚಿನ ನಾಯಕನ ಯಶಸ್ಸಿಗೆ ಏನು ಬೇಕಾದರೂ ಮಾಡಲು ಸಿದ್ಧವಿರುವ ಅಭಿಮಾನಿಗಳಿರುತ್ತಾರೆ ಅಂತೆಯೇ ಹರಿಯಾಣದ ಯುವಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಯಾಗುವ ವರೆಗೆ ಚಪ್ಪಲಿಯೇ ಹಾಕುವುದಿಲ್ಲ ಎಂದು ಶಪಥ ಮಾಡಿ ಸುದ್ದಿಯಾಗಿದ್ದಾನೆ.
ಹರಿಯಾಣದ ಕಾಕ್ರೋಡ್ ಮೂಲದ ದಿನೇಶ್ ಶರ್ಮಾ ಎಂಬ ಯುವಕ ರಾಹುಲ್ ಗಾಂಧಿ ಕೊಪ್ಪಳ ಪ್ರವಾಸದ ವೇಳೆ ಗಮನ ಸೆಳೆದಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಾನೆ.
ಕಳೆದ 7 ವರ್ಷಗಳಿಂದ ಕಾಲಿಗೆ ಚಪ್ಪಲಿ ಹಾಕದೆ ವೃತ ಕೈಗೊಂಡಿರುವ ದಿನೇಶ್ ರಾಹುಲ್ ಪ್ರಧಾನಿಯಾಗುವುದನ್ನು ಎದುರು ನೋಡುತ್ತಿದ್ದಾನಂತೆ.
ರಾಹುಲ್ ಗಾಂಧಿ ಅವರು ಭಾಗಿಯಾಗುವ ಸಮಾವೇಶಗಳಿಗೆಲ್ಲಾ ಭಾರತದ ಧ್ವಜ ಹಿಡಿದು ದಿನೇಶ್ ಶರ್ಮಾ ಹಾಜರಿದ್ದು ಕಾಂಗ್ರೆಸ್ ಕಾರ್ಯಕರ್ತರ ಗಮನ ಸೆಳೆಯುತ್ತಾರೆ.
ಶನಿವಾರ ಬಳ್ಳಾರಿಯಲ್ಲಿ ದಿನೇಶ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು ಬಳಿಕ ರಾಹುಲ್ ಕಟ್ಟಾ ಅಭಿಮಾನಿ ಎಂದು ತಿಳಿದು ಬಿಡುಗಡೆಗೊಳಿಸಿದ್ದರು.
Comments are closed.