ಕರ್ನಾಟಕ

ರಾಜ್ಯದ ಹಲವೆಡೆ ವರುಣನ ಸಿಂಚನ: ರಾಜಧಾನಿಯಲ್ಲಿ ತುಂತುರು ಮಳೆ

Pinterest LinkedIn Tumblr


ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಬುಧವಾರ ವರ್ಷದ ಮೊದಲ ಮಳೆಯಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಸಂಜೆ ಮೋಡ ಕವಿದ ವಾತಾವರಣವಿತ್ತು. ನಂತರ ತುಂತುರು ಮಳೆ ಬಿದ್ದಿದೆ.

ಸಂಜೆ ಕಚೇರಿ ಮುಗಿಸಿ ಮನೆಗೆ ತೆರಳುತ್ತಿದ್ದವರು ಮಳೆಯಲ್ಲಿ ನೆನೆದು ಹೋಗುತ್ತಿದುದು ಸಾಮಾನ್ಯವಾಗಿತ್ತು.

ಇನ್ನು ರಾಜ್ಯದ ಹಲವೆಡೆಯೂ ಮಳೆಯಾಗಿರುವ ವರದಿಯಾಗಿದೆ. ಬೆಳಗಾವಿ, ಮಂಗಳೂರು, ದಾವಣಗೆರೆ, ಬಾಗಲಕೋಟ, ತುಮಕೂರು, ಚಿಂತಾಮಣಿ, ಬೀದರ್‌ನಲ್ಲಿ ತುಂತುರು ಮಳೆಯಾಗಿದೆ.

Comments are closed.