ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್ಬುಕ್ಮೂಲಕ ಪರಿಚಯವಾದ ಶ್ರೀಲಂಕಾದ ಬಾಲಕಿಗೆ ಬಾಲಿವುಡ್ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ರಾಜ್ಯಕ್ಕೆ ಕರೆಸಿಕೊಂಡು ಅತ್ಯಾಚಾರವೆಸಗಿದ ಮೂವರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ಹಾವೇರಿಯ ಸತೀಶ್ಪಾಟೀಲ್(35) ಈತನ ಸಹಚರರಾದ ರಮೇಶ್(40) ಹಾಗೂ ಶಂಭು (20) ಬಂಧಿತರು. ಹಾವೇರಿಯಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದ ಸತೀಶ್ತನ್ನ ಫೇಸ್ಬುಕ್ಮೂಲಕ ಪರಿಚಯವಾದ ಶ್ರೀಲಂಕಾದ 14 ವರ್ಷದ ಬಾಲಕಿಗೆ, ನೀನು ನೋಡಲು ತುಂಬ ಸುಂದರವಾಗಿದ್ದು, ಹಿಂದಿ ಸಿನಿಮಾದಲ್ಲಿ ಅವಕಾಶ ಕೊಡಿಸುತ್ತೇನೆ ಎಂದು ನಂಬಿಸಿದ್ದಾನೆ.
ಈತನ ಪೊಳ್ಳು ಮಾತು ನಂಬಿದ ಆಕೆ ತನ್ನ ತಾಯಿಯೊಂದಿಗೆ ಮುಂಬೈಗೆ ಬಂದಿದ್ದಾಳೆ. ಸಹಚರರಾದ ರಮೇಶ್ಹಾಗೂ ಶಂಭುನನ್ನು ಕರೆದೊಯ್ದು ಮುಂಬೈಗೆ ಬಂದ ಆರೋಪಿ ಸಂತ್ರಸ್ತೆಯ ಫೋಟೋಶೂಟ್ಮಾಡಿಸಿದ್ದಾನೆ. ಬಳಿಕ ಹಾವೇರಿ, ಬೆಂಗಳೂರಿನಲ್ಲಿಯೂ ಫೋಟೋ ಶೂಟ್ನಡೆಸಿದ್ದಾನೆ. ಇದಕ್ಕಾಗಿ ಆಕೆಯ ತಾಯಿಯಿಂದ ಲಕ್ಷಗಟ್ಟಲೆ ಹಣ ಕಿತ್ತಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಮುಂಬೈನ ಹೋಟೆಲ್ವೊಂದರಲ್ಲಿ ತಂಗಿದ್ದ ವೇಳೆ ಸತೀಶ್ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲಿಂದ ಹಾವೇರಿಗೆ ಕರೆಸಿಕೊಂಡು ಮತ್ತೂಮ್ಮೆ ಅತ್ಯಾಚಾರ ಮಾಡಿದ್ದಾನೆ. ನಂತರ ಬೆಂಗಳೂರಿನ ಮೆಜೆಸ್ಟಿಕ್ನಲ್ಲಿ ತಾಯಿ, ಮಗಳನ್ನು ಬಿಟ್ಟು ಪರಾರಿಯಾಗಿದ್ದಾನೆ. ಮೆಜೆಸ್ಟಿಕ್ನಲ್ಲಿ ಅಲೆಯುತ್ತಿದ್ದ ಇವರನ್ನು ಗಮನಿಸಿದ ಎನ್ಜಿಒ ಸಂಸ್ಥೆಯ ಸದಸ್ಯರೊಬ್ಬರೊಬ್ಬರು ಇಬ್ಬರನ್ನು ರಕ್ಷಿಸಿ ಉಪ್ಪಾರಪೇಟೆ ಠಾಣೆಗೆ ದೂರು ನೀಡಿದರು. ಇತ್ತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಹಾವೇರಿಯಲ್ಲಿ ಬಂಧಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.
Comments are closed.