ತುಮಕೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತ ಸೆಳೆಯಲು ಶತಾಯುಗತಾಯ ಪ್ರಯತ್ನ ನಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಕಾರ್ಯಕ್ರಮವೊಂದರಲ್ಲಿ ನಡೆದ ನೃತ್ಯದಲ್ಲಿ ಡ್ಯಾನ್ಸರ್ಗಳ ನಡುವೆ ಕುಳಿತು ಗಮನ ಸೆಳೆದಿದ್ದಾರೆ.
ತಮ್ಮ ಸ್ವಕ್ಷೇತ್ರ ಕೊರಟಗೆರೆ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.
‘ಜನನಾಯಕ ನಮ್ಮ ಊರಿಗೆ’ ಎಂಬ ಹಾಡಿಗೆ ಕಲಾವಿದರು ನೃತ್ಯ ಮಾಡುತ್ತಿದ್ದರು. ಈ ವೇಳೆ ಡ್ಯಾನ್ಸರ್ಗಳ ನಡುವೆ ಕುಳಿತು ಪರಮೇಶ್ವರ್ ಜನನಾಯಕನಂತೆ ಮಿಂಚಿದ್ದಾರೆ. ಪ್ರಕ್ಷೇಕರು ತಮ್ಮ ಮೊಬೈಲ್ನಲ್ಲಿ ನೃತ್ಯದ ವೀಡಿಯೋ ಸೆರೆಹಿಡಿದು ವೈರಲ್ ಮಾಡಿದ್ದಾರೆ.
Comments are closed.