ಬೆಳಗಾವಿ: ಶ್ರವಣಬೆಳಗೊಳ ಗೊಮ್ಮಟ ವಿಗ್ರಹಕ್ಕೆ ವಸ್ತ್ರ ತೊಡಿಸುವಂತೆ ವ್ಯಕ್ತಿಯೊಬ್ಬರು ಸರ್ಕಾರಕ್ಕೆ ಪತ್ರ ಬರೆದಿರುವುದನ್ನು ಖಂಡಿಸಿ ಜೈನ ಸಮುದಾಯವರು ಶುಕ್ರವಾರ ಸದಲಗಾ ಬಂದ್ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಸದಲಗಾದಲ್ಲಿ ಸರ್ಕಾರಿ ಬಸ್ಗಳ ಸಂಚಾರ ವಿರಳವಾಗಿದ್ದು, ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿವೆ. ಪಟ್ಟಣ ಸ್ತಬ್ಧವಾಗಿದೆ.
ನಗರದಲ್ಲಿ ಜೈನ ಸಮುದಾಯದ ನೂರಾರು ಮಂದಿ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.
-ಉದಯವಾಣಿ
Comments are closed.