ಬೆಂಗಳೂರು: ಚುನಾವಣೆಗಾಗಿ ರಾಜಕೀಯ ನಾಯಕರು ಇನ್ನಿಲ್ಲದಂತೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಇದರ ನಡುವೆ ಸದಾನಂದ ಗೌಡರು ಚುನಾವಣೆಗಾಗಿ ಮಾಂಸಾಹಾರವನ್ನೇ ತ್ಯಜಿಸಿದ್ದಾರೆ!
ಚುನಾವಣೆ ಪ್ರಚಾರಕ್ಕಾಗಿ ಕಾರ್ಯಕರ್ತರು, ಅಭಿಮಾನಿಗಳ ಮನೆಗೆ ತೆರಳುವಾಗ ಮಾಂಸಾಹಾರದ ಊಟವನ್ನೇ ನೀಡುತ್ತಾರೆ. ಆದರೆ ಈ ರೀತಿ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಮಾಂಸಾಹಾರವನ್ನೇ ಬಳಸುವುದರಿಂದ ಆರೋಗ್ಯ ಹಾಳಾಗುತ್ತದೆ ಎಂದು ಸದಾನಂದ ಗೌಡರು ಇನ್ನು ಜೀವಮಾನ ಪರ್ಯಂತ ಮಾಂಸಾಹಾರ ತ್ಯಜಿಸಲು ನಿರ್ಧರಿಸಿದ್ದಾರಂತೆ.
ಚುನಾವಣೆ ಸಂದರ್ಭದಲ್ಲಿ ಆರೋಗ್ಯ ಕೆಡದಂತೆ ಕಾಪಾಡಲು ಗೌಡರು ಆಹಾರದ ವಿಚಾರದಲ್ಲಿ ಕಟ್ಟು ನಿಟ್ಟು ಪಾಲನೆ ಮಾಡಲಿದ್ದಾರೆ.
Comments are closed.