ಕರ್ನಾಟಕ

ತೆಲಗಿ ಮೃತದೇಹ ಮುಂದೆ ಕುಟುಂಬಸ್ಥರ ವಾಗ್ವಾದ

Pinterest LinkedIn Tumblr


ಖಾನಾಪುರ: ಬಹು ಅಂಗಾಂಗ ವೈಫಲ್ಯದಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪಿದ್ದ ನಕಲಿ ಛಾಪಾ ಕಾಗದ ಹಗರಣದ ಆರೋಪಿ ಕರೀಂಲಾಲ್‌ ತೆಲಗಿ ಮೃತದೇಹದ ಮುಂದೆ ಕುಟುಂಬಸ್ಥರು ಜಗಳ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಇಂದು ಬೆಳಿಗ್ಗೆ ಖಾನಾಪುರಕ್ಕೆ ತೆಲಗಿ ಮೃತದೇಹ ಆಗಮಿಸಿದ್ದು ನೋಡಲು ಬಂದ ತೆಲಗಿ ಸಹೋದರ ಅಜಿಂ ತೆಲಗಿ ಹಾಗೂ ಮಗಳು ಸನಾ ನಡುವೆ ತೀವ್ರ ವಾಗ್ವಾದ ನಡೆದಿದೆ ಎಂದು ತಿಳಿದು ಬಂದಿದೆ. ನಮ್ಮ ತಂದೆ ಅಸ್ಪತ್ರೆಯಲ್ಲಿ ದಾಖಲಾಗಿದ್ದ ಸಂದರ್ಭದಲ್ಲಿ ಯಾರೂ ನಮ್ಮನ್ನು ನೋಡಲು ಬಂದಿರಲಿಲ್ಲ ಈಗ ನಿಮ್ಮ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಸನಾ ಅವರ ಮಾತುಗಳಿಂದ ಬೇಸತ್ತ ಅಜಿಂ ತೆಲಗಿ ಮನೆಯಿಂದ ಹೊರ ನಡೆದಿದ್ದಾರೆ ಎಂದು ತಿಳಿದು ಬಂದಿದೆ.

10 ಗಂಟೆ ಸುಮಾರಿಗೆ ಬಹಾರ ಗಲ್ಲಿಯ ಕಬರಸ್ಥಾನ(ಸ್ಮಶಾನ)ದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗು ವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರ ಅಂತಿಮ ಇಚ್ಛೆಯಂತೆ ಖಾನಾಪುರ ಪಟ್ಟಣದಲ್ಲಿ ಅಂತ್ಯಕ್ರಿಯೆ ನಡೆಸಲು ಉದ್ದೇಶಿಸಲಾಗಿದೆ.

-ಉದಯವಾಣಿ

Comments are closed.