ಕರ್ನಾಟಕ

100 ಕೋಟಿ ರೂ. ಮೌಲ್ಯದ ಅಕ್ರಮ ಜಾಗ ತೆರವು

Pinterest LinkedIn Tumblr

ben
ಯಲಹಂಕ, ಡಿ. ೨೪- ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ವಿ. ಶಂಕರ್ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡಿರುವ ಕಂದಾಯ ಅಧಿಕಾರಿಗಳು ಜಾಲ ಹೋಬಳಿ ನೆಲಕುಂಟೆ ಗ್ರಾಮದ ಸರ್ವೆ ನಂ. 45 ರಲ್ಲಿ ಶ್ರೀ ಕೃಷ್ಣದೇವರಾಯ ಎಜುಕೇಷನ್ ಟ್ರಸ್ಟ್‌ನ ಆ‌ಡಳಿತ ಮಂಡಳಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ನೂರು ಕೋಟಿ ರೂ. ಗೂ ಅಧಿಕ ಮೌಲ್ಯದ ಸುಮಾರು 20.7 ಗುಂಟೆ ಸರ್ಕಾರಿ ಜಾಗವನ್ನು ತೆರವುಗೊಳಿಸಿ ವಶಪಡಿಸಿಕೊಂಡಿದ್ದಾರೆ.
ಉಪವಿಭಾಗಾಧಿಕಾರಿಗಳ ಆದೇಶದಂತೆ, ಶ್ರೀ ಕೃಷ್ಣ ದೇವರಾಯ ಎಜುಕೇಷನ್ ಟ್ರಸ್ಟ್ ಆಡಳಿತ ಮಂಡಳಿಗೆ ನೋಟೀಸ್ ಜಾರಿ ಮಾಡಲಾಗಿತ್ತು. ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಇಂದು ಬೆಳಿಗ್ಗೆ ಕಾರ್ಯಾಚರಣೆ ಕೈಗೊಂಡಿರುವ ಅಧಿಕಾರಿಗಳ ತಂಡ ಒತ್ತುವರಿ ತೆರವುಗೊಳಿಸಿದೆ.
ಉಪವಿಭಾಗಾಧಿಕಾರಿ ರಂಗನಾಥ್, ತಹಸಿಲ್ದಾರ್ ಮಂಜುನಾಥ್, ರೆವಿನ್ಯೂ ಇನ್ಸ್‌ಪೆಕ್ಟರ್ ಮಂಜುನಾಥ್, ಸರ್ವೆ ಅಧಿಕಾರಿ ರಂಗನಾಥ್ ತಂಡ ಕಾರ್ಯಾಚರಣೆ ನಡೆಸಿ ಒತ್ತುವರಿ ತೆರವುಗೊಳಿಸಿದ್ದಾರೆ.

Comments are closed.