ಕರ್ನಾಟಕ

ಮನೆಗೆಲಸದವನಿಂದ ಶೂ ಲೇಸ್ ಕಟ್ಟಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ

Pinterest LinkedIn Tumblr

siddaramaiah
ಮೈಸೂರು(ಡಿ.25): ರಾಜಕಾರಣಿಗಳು ತಮ್ಮ ಬಾಡಿಗಾರ್ಡ್, ಕೆಲಸದವರನ್ನ ಕೆಲವೊಮ್ಮೆ ತುಂಬಾ ಕೇವಲವಾಗಿ ನಡೆಸಿಕೊಳುತ್ತಾರೆ. ಈ ಸಾಲಿಗೆ ರಾಜ್ಯದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಕೂಡ ಸೇರಿದ್ದಾರೆ. ನಿನ್ನೆ ತಮ್ಮ ಮನೆಗೆಲಸದವನ ಕೈಯ್ಯಲ್ಲಿ ಶೂ ಲೇಸ್ ಕಟ್ಟಿಸಿಕೊಂಡು ವಿವಾದಕ್ಕೆ ಕಾರಣರಾಗಿದ್ದಾರೆ.
ಸಚಿವ ಮಹದೇವಪ್ಪ ಅವರ ಜೊತೆ ಸಿಎಂ ಮನೆಯಿಂದ ಹೊರಗಡೆ ಹೊರಟಿದ್ದರು. ಈ ವೇಳೆ ಮನೆಗೆಲಸದವನ ಕೈಯಲ್ಲಿ ಸಿಎಂ ತಮ್ಮ ಶೂ ಲೇಸ್ ಕಟ್ಟಿಸಿಕೊಂಡಿದ್ದು, ಕ್ಯಾಮರಾದಲ್ಲಿ ಸೆರೆಯಾಗಿದೆ. ಇದು ತೀವ್ರ ಚರ್ಚೆಗೆ ಕಾರಣವಾಗಿದೆ.

Comments are closed.