ಬೆಂಗಳೂರು: ನೆಲಮಂಗಲ ಪಟ್ಟಣದ ಎಸ್ಬಿಎಂ ಬ್ಯಾಂಕ್ನಿಂದ, ಇಬ್ಬರು ವ್ಯಕ್ತಿಗಳು ಎರಡು ಸೂಟ್ಕೇಸ್ನಲ್ಲಿ ಲಕ್ಷ ಲಕ್ಷ ಹಣವನ್ನು ಯಾವುದೇ ಭದ್ರತೆ ಇಲ್ಲದೇ ಸಾಗಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಎಸ್ಬಿಎಂ ಬ್ಯಾಕಿನ ಮ್ಯಾನೇಜರ್ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.
ಮ್ಯಾನೇಜರ್ ವರದರಾಜು ಸ್ಪಷ್ಟನೆ ನೀಡಿದ್ದು, ನಮ್ಮ ಬ್ಯಾಂಕ್ ಸಿಬ್ಬಂದಿ ಯಾವುದೇ ತಪ್ಪು ಎಸಗಿಲ್ಲ. ಕಾವೇರಿ ಗ್ರಾಮೀಣ ಬ್ಯಾಂಕ್ ಮೇನೆಜರ್ ಸುರೇಶ್ ಎಂಬುವವರು, 40 ಲಕ್ಷ ಹಣವನ್ನ ತಮ್ಮ ಗ್ರಾಹಕರ ವ್ಯವಹಾರಕ್ಕಾಗಿ ಡ್ರಾ ಮಾಡಿದ್ದು ಈ ಕಾರಣಕ್ಕೆ ಗ್ರಾಹಕರಲ್ಲಿ ಗೊಂದಲ ಉಂಟಾಗಿತ್ತು. ಭದ್ರತೆ ಪಡೆದುಕೊಳ್ಳುವಂತೆ ನಾನು ಅವರಿಗೆ ಸಲಹೆ ನೀಡಿದ್ದೆ ಎಂದು ಅವರು ತಿಳಿಸಿದ್ದಾರೆ.
ಈ ವಿಚಾರದಲ್ಲಿ ಕಾವೇರಿ ಗ್ರಾಮೀಣ ಬ್ಯಾಂಕ್ ಮೇನೆಜರ್ ಸುರೇಶ್ ಕೂಡ, ತಮ್ಮ ಭದ್ರತೆ ವೈಫಲ್ಯದ ಬಗ್ಗೆ ಮನವರಿಕೆ ಮಾಡಿಕೊಂಡಿದ್ದಾರೆ.ಹಣ ರವಾನೆ ವೇಳೆ ಸಿಬ್ಬಂದಿ ಸೂಕ್ತ ಭದ್ರತೆಯಿಲ್ಲದೆ ಹಣವನ್ನು ಆಟೋದಲ್ಲಿ ಸಾಗಿಸಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿತ್ತು. ಭದ್ರತಾ ಸಿಬ್ಬಂದಿ ಇಲ್ಲದೇ ಹಣವನ್ನು ರವಾನಿಸಿದ ಬಗ್ಗೆ ಪಬ್ಲಿಕ್ ಟಿವಿ ವರದಿಯನ್ನು ಪ್ರಸಾರ ಮಾಡಿತ್ತು.
(ಪಬ್ಲಿಕ್ ಟಿವಿ)
Comments are closed.