ಕರ್ನಾಟಕ

ಸಿದ್ದರಾಮಯ್ಯನ ಐಎಎಸ್‌ ಆಪ್ತನ ಮೇಲೆ ಐಟಿ ದಾಳಿ

Pinterest LinkedIn Tumblr

income-taxclrಬೆಂಗಳೂರು,ನ.೩೦-ಐಎಎಸ್ ಅಧಿಕಾರಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅಪರ ಅಪ್ತರಾಗಿರುವ ಕಾವೇರಿ ನಿಗಮದ ಹಿರಿಯ ಅಧಿಕಾರಿ ಸೇರಿದಂತೆ ಮೂವರು ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎಕಕಾಲಕ್ಕೆ ದಾಳಿ ನಡೆಸಿ ಅಪಾರ ಪ್ರಮಾಣದ ಹಣ ಹಾಗೂ ದಾಖಲೆಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಡಾಲರ್ಸ್ ಕಾಲೋನಿಯ ಐಎಎಸ್ ಅಧಿಕಾರಿಯ ಅವರ ಮನೆ ಕಚೇರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಪ್ತರಾಗಿರುವ ಅಧಿಕಾರಿಯ ಮನೆ ಕಚೇರಿ ಹಾಗೂ ಧನಲಕ್ಷ್ಮೀ ಕೋ ಆಪರೇಟಿವ್ ಸೊಸೈಟಿಯ ಅಧಿಕಾರಿಯೊಬ್ಬರ ಅವರ ಮನೆ ಕಚೇರಿಗಳ ಮೇಲೆ ಮುಂಜಾನೆ ದಾಳಿ ನಡೆಸಿ ನಗದು ಚಿನ್ನಾಭರಣಗಳು ಆಸ್ತಿಪಾಸ್ತಿಗಳ ದಾಖಲೆಪತ್ರಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.
ಮೂವರು ಅಧಿಕಾರಿಗಳು ಆದಾಯಕ್ಕೂ ಮೀರಿ ಕೋಟ್ಯಾಂತರ ಮೌಲ್ಯದ ಅಕ್ರಮ ಆಸ್ತಿ ಹೊಂದಿ ಆದಾಯ ತೆರಿಗೆ ವಂಚಿಸಿರುವ ಮಾಹಿತಿ ಆಧರಸಿ ಆದಾಯ ಇಲಾಖೆ ಅಧಿಕಾರಿಗಳ ಮೂರು ತಂಡಗಳು ಎಕಕಾಲಕ್ಕೆ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿ ಮೂವರು ಅಧಿಕಾರಿಗಳಿಗೆ ಕೊರೆಯುವ ಚಳಿಯಲ್ಲೂ ಬೆವರಿಳಿಸಿವೆ.
ಸ್ಥಳೀಯ ಪೊಲೀಸರ ನೆರವಿನೊಂದಿಗೆ ಯಾವುದೇ ಸುಳಿವು ನೀಡದೆ ದಾಳಿ ನಡೆಸಲಾಗಿದ್ದು ದಾಳಿಯ ವೇಳೆ ಪತ್ತೆಯಾದ ಆದಾಯ ತೆರಿಗೆ ಮೀರಿದ ಆಸ್ತಿಪಾಸ್ತಿಯ ವಿವರಗಳನ್ನು ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.

Comments are closed.