ಕರ್ನಾಟಕ

ಅಷ್ಟಕ್ಕೂ ಎಟಿಎಂಗೆ ತುಂಬಿಸುವ ಹಣ ಕದ್ದಿದ್ದು ಯಾಕೆ ಗೊತ್ತಾ?

Pinterest LinkedIn Tumblr

damnikಬೆಂಗಳೂರು(ನ.29): ಬ್ಯಾಂಕ್ ಕ್ಯಾಶ್ ಇದ್ದ ವಾಹನ ಲೂಟಿ ಮಾಡಿ ರಾಜಧಾನಿಯಲ್ಲಿ ಸೆನ್ಸೇಷನಲ್ ಕ್ರಿಯೇಟ್ ಮಾಡಿದ್ದ ಚಾಲಾಕಿ ಡಾಮ್ನಿಕ್ ಕೊನೆಗೂ ಅಂದರ್ ಆಗಿದ್ದಾನೆ. ನಿನ್ನೆ ರಾತ್ರಿ ಕೆ.ಆರ್ ಪುರಂ ಬಳಿ ಉಪ್ಪಾರ್ ಪೇಟೆ ಪೊಲೀಸರು ಡಾಮ್ನಿಕ್ ಹೆಡೆಮುರಿಕಟ್ಟಿದ್ದಾರೆ.
ಕೋಟಿ ಹಣ ಲೂಟಿ ಮಾಡಿ ರಾಜಧಾನಿ ಪೊಲೀಸರ ನಿದ್ದೆ ಕೆಡಿಸಿದ್ದ ಡಾಮ್ನಿಕ್ ಕೊನೆಗೂ ಸಿಕ್ಕಿ ಬಿದ್ದಿದ್ದಾನೆ. ಬಾಣಸವಾಡಿ ಪೊಲೀಸರು ಪತ್ನಿ ಎಲಿವಿನಾಳನನ್ನು ಅರೆಸ್ಟ್ ಮಾಡಿದ್ದ ವಿಚಾರ ತಿಳಿದ ಡಾಮ್ನಿಕ್ ನಿನ್ನೆ ಕೆ.ಆರ್ ಪುರಂಗೆ ಬಂದಿದ್ದಾನೆ. ಟಿನ್ ಫ್ಯಾಕ್ಟರಿ ಬಳಿ ರಾತ್ರಿ ಸ್ನೇಹಿತರ ಜೊತೆ ಡಾಮ್ನಿಕ್ ಮದ್ಯ ಸೇವಿಸುವ ವೇಳೆ ಮುಪ್ತಿಯಲ್ಲಿದ್ದ ಉಪ್ಪಾರ್ ಪೇಟೆ ಪೊಲೀಸರು ಡಾಮ್ನಿಕ್ ನನ್ನು ಖೆಡ್ಡಾಗೆ ಬೀಳಿಸಿದ್ದಾರೆ.
ಇನ್ನೂ, ಉಪ್ಪಾರ್ ಪೇಟೆ ಪೊಲೀಸರ ವಿಚಾರಣೆ ವೇಳೆ ಡಾಮ್ನಿಕ್ ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾನೆ. ಆರೋಪಿಗಳಿಂದ ಈಗಾಗಲೇ 79 ಲಕ್ಷ ಹಣ ರಿಕವರಿ ಮಾಡಲಾಗಿದೆ. ಇನ್ನು ಹಣತುಂಬಿಸುವ ಜವಬ್ದಾರಿ ಹೊತ್ತಿದ್ದ ಲಾಜಿ ಕ್ಯಾಶ್ ಸಂಸ್ಥೆ ಆರ್ ಬಿ ಐ ನಿಯಮಗಳನ್ನು ಮೀರಲಾಗಿದ್ಯಾ ಎನ್ನುವ ನಿಟ್ಟಿನಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದು ನಿಯಮ ಉಲ್ಲಂಘನೆಯಾಗಿದ್ರೆ ಸೂಕ್ತ ಕ್ರಮ ತೆಗೆದುಕೊಳ್ಳಲಿದ್ದಾರೆ.
ಅದೇನೇ ಇರ್ಲಿ ಹೆಂಡತಿಯ ಅಸೆಗಳನ್ನು ಪೂರೈಸಲು ಆಗದೇ ಡಾಮ್ನಿಕ್ ಕಳ್ಳತನ ಮಾಡಿರೋದು ಪೊಲೀಸರ ವಿಚಾರಣೆಯಲ್ಲಿ ಗೊತ್ತಾಗಿದ್ದು ತನಿಖೆಯನ್ನು ಮುಂದುವರಿಸಿದ್ದಾರೆ..

Comments are closed.