ಕರ್ನಾಟಕ

ಮನೆಗೆ ಬೆಂಕಿ ಇಟ್ಟು ಪ್ರಿಯಕರನೊಂದಿಗೆ ಪರಾರಿ

Pinterest LinkedIn Tumblr

Fireತುಮಕೂರು: ಗಂಡನ ಮನೆಗೆ ಬೆಂಕಿ ಇಟ್ಟು ಗೃಹಿಣಿ ಪ್ರಿಯಕರನೊಂದಿಗೆ ಓಡಿ ಹೋದ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಪೆಮ್ಮನಹಳ್ಳಿಯಲ್ಲಿ ನಡೆದಿದೆ.

ಧನಂಜಯ ಎನ್ನುವವರ ಪತ್ನಿ ನರಸಮ್ಮ ಅದೇ ಗ್ರಾಮದ ರಘು ಎನ್ನುವವನ ಜೊತೆ ನವಂಬರ್ 4 ರಂದು ಪರಾರಿಯಾಗಿದ್ದಾಳೆ. ಮನೆಯಲ್ಲಿದ್ದ ದಿನಸಿ ಹಾಗೂ ಮಕ್ಕಳ ಪುಸ್ತಕ ಮತ್ತು ಬಟ್ಟೆಗಳನ್ನು ಸುಟ್ಟು ಪತಿ ಜೊತೆಗೆ ತನ್ನಿಬ್ಬರು ಮಕ್ಕಳನ್ನು ಬಿಟ್ಟು ನರಸಮ್ಮ ಪರಾರಿಯಾಗಿದ್ದಾಳೆ.

ಮದುವೆಯಾಗಿ 18 ವರ್ಷ ಧನಂಜಯ ಅವರ ಜೊತೆ ಚೆನ್ನಾಗಿಯೇ ಸಂಸಾರ ಮಾಡಿಕೊಂಡಿದ್ದ ನರಸಮ್ಮನಿಗೆ ಇತ್ತೀಚೆಗೆ ರಘು ಎಂಬವನ ಪರಿಚಯವಾಗಿ ಅವನ ಜೊತೆ ಅನೈತಿಕ ಸಂಬಂಧ ಬೆಳೆದಿತ್ತು ಎನ್ನಲಾಗಿದೆ. ಹೀಗಾಗಿ ಮನೆ ಬಿಟ್ಟು ಓಡಿ ಹೋಗಿದ್ದಾಳೆ ಎಂದು ಪತಿ ಧನಂಜಯ್ ಹೇಳಿದ್ದಾರೆ. ಈ ಬಗ್ಗೆ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Comments are closed.