ಕರ್ನಾಟಕ

ಆಡುಗೋಡಿ ಉಪಚುನಾವಣೆ: ‘ಕೈ’ ಪರ ಜನರ ಒಲವು

Pinterest LinkedIn Tumblr

congress-3ಬೆಂಗಳೂರು, ನ ೧೬- ಲಕ್ಕಸಂದ್ರ ಉಪಚುನಾವಣೆಗೆ ಇನ್ನು ಮೂರೇ ದಿನ ಬಾಕಿಯಿದ್ದು, ಕಣಕ್ಕಿಳಿದಿರುವ ಕಾಂಗ್ರೆಸ್ ಅಭ್ಯರ್ಥಿ ಆಡುಗೋಡಿ ಬಿ ಮೋಹನ್ ಅವರು ರ್ಡಿನೆಲ್ಲೆಡೆ ಇಂದು ಭರ್ಜರಿ ಪ್ರಚಾರ ನಡೆಸಿದರು.ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮೋಹನ್ ಅವರು ವಾರ್ಡಿನಲ್ಲಿ ಚುನಾವಣಾ ಕಾವು ಜೋರಾಗಿದ್ದು, ಮತದಾರರು ಕೈ ಪರ ಒಲವು ತೋರಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಚಾರ ದಿನದಿಂದ ಪ್ರತಿದಿನ ಹಿರಿಯ ನಾಯಕ ಹಾಗು ಸಚಿವ ರಾಮಲಿಂಗಾ ರೆಡ್ಡಿ ಅವರು ನನ್ನೊಂದಿಗೆ ಕೈಜೋಡಿಸಿ ಪಕ್ಷದ ಗೆಲುವಿಗೆ ಪಣತೊಟ್ಟಿದ್ದಾರೆ. ಅವರ ನೆರವನ್ನು ಎಂದಿಗೂ ಮರೆಯುವುದಿಲ್ಲ ಎಂದು ಅಭಿಮಾನದ ಮಾತುಗಳಾನ್ನಾಡಿದರು. ಲಕ್ಕಸಂದ್ರ ಸುತ್ತಮತ್ತ ಇಂದು ಭರ್ಜರಿ ಪ್ರಚಾರ ನಡೆಸಿದ ಮೋಹನ್ ಅವರು ಮತದಾರರಿಗೆ ಕಾಂಗ್ರೆಸ್ ಪಕ್ಷದ ಸಾಧನೆಯ ಭಿತ್ತಿಪತ್ರಗಳನ್ನು ಹಂಚಿ ಗಮನ ಸೆಳೆದರು. ಹಾಗೂ ಇದೇ ಸಂದರ್ಭದಲ್ಲಿ ವಾರ್ಡಿನ ಸಮಸ್ಯೆಗಳನ್ನು ಆಲಿಸಿ ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳುವ ಬಗ್ಗೆ ಭರವಸೆ ನೀಡಿದರು.
ಸಚಿವ ರಾಮಲಿಂಗಾ ರೆಡ್ಡಿ, ಬಿಎಂಟಿಸಿ ಉಪಾಧ್ಯಕ್ಷ ವಿ.ಎಸ್.ಆರಾಧ್ಯ, ನೂರಾರು ಕಾರ್ಯಕರ್ತರು ಇಂದು ಸಹ ವಾರ್ಡಿನಲ್ಲಿ ಮೋಹನ್ ಪರ ಪ್ರಚಾರ ನಡೆಸಿ ಕಾಂಗ್ರೆಸ್ ಗೆಲುವಿಗೆ ಕಾರಣರಾಗಬೇಕೆಂದು ಮನವಿ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ ಅವರು ಉತ್ತಮ ಆಕಾಂಕ್ಷೆವುಳ್ಳ ಮೋಹನ್ ವಾರ್ಡನ್ನು ಅಭಿವೃದ್ಧಿ ಪಥದತ್ತ ಕೊಂಡಯ್ಯಲು ಪ್ರಾಮಾಣಿಕವಾಗಿ ಶ್ರಮಿಸಲಿದ್ದಾರೆ. ಹಾಗಾಗಿ ಜನರು ಮರೆಯದೇ ಮೋಹನ್ ಪರ ಮತಚಲಾಯಿಸಿ ಗೆಲುವು ತಂದು ಕೊಡುವ ವಿಶ್ವಾಸವಿದೆ ಎಂದು ಹೇಳಿದರು.
ಲಕ್ಕಸಂದ್ರ ವಾರ್ಡಿನ ನಂಜಪ್ಪ ವೃತ್ತ, ಅಯ್ಯಪ್ಪ ಗಾರ್ಡನ್, ರಂಗದಾಸಪ್ಪ ಲೇಔಟ್, ಲಕ್ಕಸಂದ್ರ ಸೇರಿದಂತೆ ನಾನಾ ಕಡೆ ನೂರಾರು ಬೆಂಬಲಿಗರೊಂದಿಗೆ ಮೋಹನ್ ಅವರು ಭರ್ಜರಿ ಪ್ರಚಾರ ನಡೆಸಿದರು. ವಾರ್ಡಿನಲ್ಲೂ ಪಕ್ಷ ಅಧಿಕಾರಕ್ಕೆ ಬಂದರೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು ಎಂದು ಮತದಾರರ ಗಮನಕ್ಕೆ ತಂದು ಮತಯಾಚಿಸಿದ ಮೋಹನ್ ಅವರಿಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

Comments are closed.